ನವದೆಹಲಿ: ಜ್ಞಾನವಾಪಿ ಮಸೀದಿಯ ಆವರಣದಲ್ಲಿ ನಡೆಸಲಾದ ವಿಡಿಯೋಗ್ರಫಿಗೆ ಸಂಬಂಧಿಸಿದ ವರದಿಯನ್ನು ಗುರುವಾರ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಾಗಿದೆ.
ಜ್ಞಾನವಾಪಿ ಮಸೀದಿಯೊಳಗೆ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ಐವರು ಮಹಿಳೆಯರು ನ್ಯಾಯಾಲಯದ ಮುಂದೆ ಮನವಿ ಮಾಡಿದರು. ಮಸೀದಿಯಲ್ಲಿ ಹಿಂದೂ ದೇವರು ಮತ್ತು ದೇವತೆಗಳ ಪ್ರತಿಮೆಗಳಿವೆ ಎಂದು ಅವರು ಪ್ರತಿಪಾದಿಸಿದ್ದರು.
ನಂತರ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ಆವರಣದಲ್ಲಿ ವೀಡಿಯೊಗ್ರಫಿಗೆ ಆದೇಶಿಸಿತ್ತು.
ವಕೀಲರು ಹಂಚಿಕೊಂಡ ‘ವರದಿ’ ಪ್ರಕಾರ, ಜ್ಞಾನವಾಪಿ ಮಸೀದಿ ಆವರಣದಲ್ಲಿ ತ್ರಿಶೂಲಗಳು, ಕಮಲದ ಹೂವುಗಳು ಮತ್ತು ಹಿಂದೂ ಧರ್ಮದ ಕೆಲವು ಪ್ರಾಚೀನ ಶಿಲ್ಪಗಳನ್ನ ಕೆತ್ತನೆ ಪತ್ತೆಯಾಗಿದೆ. ಮಸೀದಿಯೊಳಗೆ ಶಿವಲಿಂಗ ಪತ್ತೆಯಾಗಿದೆ.
ವರದಿಯ ಪ್ರಕಾರ, ಮಸೀದಿಯ ನೆಲಮಾಳಿಗೆಯ ಕಂಬಗಳ ಮೇಲೆ ಹೂವುಗಳು ಮತ್ತು ಕಲಶದ ಗುರುತುಗಳನ್ನು ಕೆತ್ತಲಾಗಿದೆ. ಸ್ತಂಭದ ಮೇಲೆ ಪ್ರಾಚೀನ ಹಿಂದಿ ಭಾಷೆಯ ಕೆಲವು ಪದಗಳನ್ನು ಕೆತ್ತಲಾಗಿದೆ. ನೆಲಮಾಳಿಗೆಯ ಗೋಡೆಗಳ ಮೇಲೆ ತ್ರಿಶೂಲದ ಗುರುತುಗಳಿವೆ. ಮಸೀದಿಯ ಪಶ್ಚಿಮ ಭಾಗದಲ್ಲಿ ಎರಡು ದೊಡ್ಡ ಕಂಬಗಳು ಮತ್ತು ಕಮಾನು ಕಾಣಿಸಿದೆ. ಅವು ಪುರಾತನ ದೇವಾಲಯದ ಭಾಗವಾಗಿರುವಂತೆ ತೋರುತ್ತದೆ.
ಮಸೀದಿಯ ಮೂರನೇ ಗುಮ್ಮಟದ ಕೆಳಗೆ ಕಲ್ಲಿನ ಮೇಲೆ ಕಮಲದ ಗುರುತು ಕೆತ್ತಲಾಗಿದೆ ಎಂದು ವರದಿ ಹೇಳಿದೆ. ಮಸೀದಿ ಆವರಣದಲ್ಲಿ ಎರಡೂವರೆ ಅಡಿ ಉದ್ದದ ರಚನೆ ಕಾಣಿಸಿದೆ. ಇದು ಶಿವಲಿಂಗ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.