ಬೆಂಗಳೂರು: ಕರ್ನಾಟಕದಲ್ಲಿ ಬೆಳೆಯುವ ಸ್ಥಳೀಯ ಮಾವಿನ ಹಣ್ಣುಗಳನ್ನು ಆನ್ಲೈನ್ ಮಾಧ್ಯಮದ ಮೂಲಕ ಗ್ರಾಹಕರಿಗೆ ತಲುಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ (KSMD&MCL) ಯಾವುದೇ ಮಧ್ಯವರ್ತಿಗಳಿಲ್ಲದೆ ಉತ್ಪನ್ನವನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಮೇ 16 ರಂದು ವೆಬ್ಸೈಟ್ ಅನ್ನು ಪ್ರಾರಂಭಿಸಿದೆ.
ಆನ್ಲೈನ್ ಪೋರ್ಟಲ್ಗೆ ಕರ್ನಾಟಕದ ಟ್ರೇಡ್ಮಾರ್ಕ್ ಮಾವು ಕರ್ಸಿರಿಯ ಹೆಸರನ್ನು ಇಡಲಾಗಿದೆ. ಭಾರತ ಅಂಚೆ ಸಹಯೋಗದೊಂದಿಗೆ ಸೋಮವಾರ ಇದನ್ನು ಪ್ರಾರಂಭಿಸಲಾಗಿದೆ. ಇದನ್ನು www.karsirimangoes.karnataka.gov.in ನಲ್ಲಿ ಪ್ರವೇಶಿಸಬಹುದು.
ಇದರ ಮೂಲಕ ಕನಿಷ್ಠ ವೆಚ್ಚದಲ್ಲಿ ಮನೆ ಬಾಗಿಲಿಗೆ ರುಚಿಕರವಾದ, ತಾಜಾ ಮಾವಿನಹಣ್ಣುಗಳನ್ನು ಸವಿಯುವ ಭಾಗ್ಯ ಗ್ರಾಹಕರಿಗೆ ದೊರೆಯಲಿದೆ. ಇದು ಗ್ರಾಹಕರು ಮತ್ತು ರೈತರನ್ನು ನೇರವಾಗಿ ಸಂಪರ್ಕಿಸುವ ಆಲೋಚನೆಯೂ ಹೌದು.
ಅಲ್ಫೋನ್ಸೋ, ಬಂಗನಪಲ್ಲಿ, ನೀಲಂ, ಆಮ್ರಪಾಲಿ, ದಶೆಹರಿ, ಕೇಸರ್, ಬೆನೇಶನ್, ತೋತಾಪುರಿ, ಮಾಲ್ಗೋವಾ, ಮಲ್ಲಿಕಾ, ರಸಪುರಿ ಮತ್ತು ಸೆಂಧುರ ಮಾವಿನ ತಳಿಗಳು ವೆಬ್ಸೈಟ್ನಲ್ಲಿ ಕಾಣಿಸಿಕೊಂಡಿವೆ. ದಾಳಿಂಬೆ, ಪೇರಳೆ, ರಂಬುಟಾನ್, ಆವಕಾಡೊ ಮತ್ತು ಅಂಜೂರದಂತಹ ತಾಜಾ ಮತ್ತು ವಿದೇಶಿ ಹಣ್ಣುಗಳು ಕೂಡ ಶೀಘ್ರದಲ್ಲೇ ಪೋರ್ಟಲ್ನಲ್ಲಿ ಲಭ್ಯವಾಗಲಿವೆ.
ಪ್ರಸ್ತುತ, ಬೆಂಗಳೂರು ನಿವಾಸಿಗಳು ಮಾತ್ರ ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ಆರ್ಡರ್ಗಳನ್ನು ನೀಡಬಹುದು. ಈ ವೆಬ್ಸೈಟ್ಗೆ ಕನಿಷ್ಠ 3 ಕೆಜಿ ಆರ್ಡರ್ ಅತ್ಯಗತ್ಯ. ಮಾವಿನ ತಳಿಗಳ ಛಾಯಾಚಿತ್ರಗಳು ಮತ್ತು ಬೆಲೆಗಳನ್ನು ಇದರಲ್ಲಿ ಪ್ರದರ್ಶಿಸಲಾಗುತ್ತದೆ. ನಮಗೆ ಬೇಕಾದ ಮಾವನ್ನು ಆಯ್ಕೆಮಾಡಬಹುದು. ರೈತರು ನೇರವಾಗಿ ಬೆಂಗಳೂರಿನ ಜನರಲ್ ಪೋಸ್ಟ್ ಆಫೀಸ್ ಮೂಲಕ ತಮ್ಮ ಮಾವನ್ನು ಪ್ಯಾಕ್ ಮಾಡಿ ಗ್ರಾಹಕರಿಗೆ ಪೂರೈಸುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.