ಢಾಕಾ : ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ದೌರ್ಜನ್ಯ ಮುಂದುವರೆದಿದೆ. ಢಾಕಾದ ಇಸ್ಕಾನ್ ರಾಧಾಕಾಂತ ದೇಗುಲದ ಮೇಲೆ 200 ಮಂದಿ ದುಷ್ಕರ್ಮಿಗಳು ದಾಳಿ ಮಾಡಿ ದೇಗುಲವನ್ನು ಹಾನಿಗೊಳಪಡಿಸಿದ್ದಾರೆ.
ಢಾಕಾದ ಲಾರಿ 222 ಲಾಲ್ ಮೋಹನ್ ಸಹಾ ಸ್ಟ್ರೀಟ್ನಲ್ಲಿರುವ ದೇಗುಲದಲ್ಲಿ ಗುರುವಾರ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಹಾಜಿ ಶಫಿಯುಲ್ಲಾ ನೇತೃತ್ವದ ಗುಂಪು ಈ ದಾಳಿ ನಡೆಸಿದೆ ಎನ್ನಲಾಗಿದೆ. ಘಟನೆಯಲ್ಲಿ ದೇಗುಲದ ಹಲವು ಮಂದಿ ಸಿಬ್ಬಂದಿಗೆ ಗಾಯಗಳಾಗಿವೆ.
ಕಳೆದ ವರ್ಷವೂ ಬಾಂಗ್ಲಾದೇಶದಲ್ಲಿ ನಡೆದ ಕೋಮುಗಲಭೆಯಲ್ಲಿ ಮೂರು ಮಂದಿ ಹತ್ಯೆಯಾಗಿದ್ದರು. ದುರ್ಗಾ ಪೆಂಡಾಲ್ನಲ್ಲಿ ಕುರಾನ್ ಅನ್ನು ಸುಟ್ಟು ಹಾಕಲಾಗಿದೆ ಎಂಬ ಸಾಮಾಜಿಕ ಜಾಲತಾಣಗಳ ವದಂತಿಯ ಹಿನ್ನೆಲೆಯಲ್ಲಿ ಕೋಮುಗಲಭೆ ನಡೆದಿತ್ತು. ಇದಕ್ಕೂ ಮುನ್ನ ಕೂಡ ಹಿಂದೂಗಳ ಮೇಲೆ ದಾಳಿ ನಡೆದ ಹಲವಾರು ಘಟನೆಗಳು ನಡೆದಿವೆ.
It was with the intention of take control the temple property that the jihadis attacked the Radhakant ISKCON temple in Wari in Dhaka, the capital of Bangladesh. @UNHumanRights @india_iskcon @TulsiGabbard @WHCongress @HinduAmerican @VHPDigital 👇 pic.twitter.com/MeVvYErXw5
— SATYAM SANGHA (@BangladeshVedic) March 17, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.