ಅಯೋಧ್ಯಾ: ಶ್ರೀರಾಮ ಜನ್ಮಸ್ಥಳ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಇದ್ದ ಎಲ್ಲಾ ಅಡೆತಡೆಗಳು ದೂರವಾಗಿದೆ. ಹೀಗಾಗಿ ವಿಶ್ವ ಹಿಂದೂ ಪರಿಷತ್ ಶೀಘ್ರದಲ್ಲೇ ಭವ್ಯವಾದ ಮಂದಿರವನ್ನು ನಿರ್ಮಾಣ ಮಾಡಲು ಬೇಕಾದ ಏರ್ಪಾಟುಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ದೇಗುಲದ ಬಗೆಗಿನ ಹಲವು ನೀಲ ನಕ್ಷೆಗಳನ್ನು ಅದು ಸಿದ್ಧಪಡಿಸಿಕೊಂಡಿದೆ. ಆದರೆ ಅಂತಿಮ ನೀಲನಕ್ಷೆ ಮೂಲ ರಾಮಮಂದಿರದ ರಚನೆಯನ್ನೇ ಹೋಲಲಿದೆ ಎಂದು ಹೇಳಲಾಗಿದೆ.
ಹಲವು ವರ್ಷಗಳಿಂದ ರಾಮ ಮಂದಿರ ನಿರ್ಮಾಣಕ್ಕಾಗಿ ಬಾಗಿಲು, ಕಂಬಗಳನ್ನು ಕೆತ್ತನೆ ಮಾಡಲಾಗಿದೆ, ಕಲ್ಲುಗಳನ್ನೂ ತಂದು ಹಾಕಲಾಗಿದೆ. ಮಂದಿರ ನಿರ್ಮಾಣ ಕಾರ್ಯ ಆರಂಭ ಮಾತ್ರ ಬಾಕಿ ಇದೆ. ಮಂದಿರಕ್ಕೆ ಒಟ್ಟು 212 ಕಂಬಗಳು ಬೇಕಾಗುತ್ತವೆ. ಈಗಾಗಲೇ 106 ಕಂಬಗಳನ್ನು ಎರಡು ಕಡೆಗಳಲ್ಲಿ ಸಂಗ್ರಹಿಸಲಾಗಿದೆ. ಇನ್ನೂ ಅರ್ಧದಷ್ಟು ಕಂಬಗಳು ಬೇಕಾಗುತ್ತವೆ.
ಎರಡು ಪದರದಲ್ಲಿ ಕಂಬಗಳ ಜೋಡಣೆ ಕಾರ್ಯ ನಡೆಯಲಿದೆ. ಎರಡನೇ ಪದರದಲ್ಲಿ ಮೇಲ್ಛಾವಣಿ ಇರಲಿದೆ. ಮೇಲ್ಛಾವಣಿಯಲ್ಲಿ ‘ಶಿಖರ’ ಇರಲಿದೆ, ಇದು ಮಂದಿರಕ್ಕೆ ಭವ್ಯವಾದ ನೋಟವನ್ನು ನೀಡಲಿದೆ ಎನ್ನಲಾಗಿದೆ.
ಪ್ರಸ್ತಾವಿತ ರಾಮ ಮಂದಿರದ ರಚನೆಯು 128 ಅಡಿ ಎತ್ತರವಿರಲಿದೆ. 140 ಅಡಿ ಅಗಲವಿರಲಿದೆ, 200 ಅಡಿ ಉದ್ದವಿರಲಿದೆ. ಸಪೋರ್ಟ್ ಬೇಸ್ ಆಗಿ ಸ್ಟೀಲ್ ಅನ್ನು ಇಲ್ಲಿ ಬಳಕೆ ಮಾಡದಿರಲು ನಿರ್ಧರಿಸಲಾಗಿದೆ, ಇದು ಅದಕ್ಕೆ ವಿಭಿನ್ನತೆಯನ್ನು ತಂದುಕೊಡಲಿದೆ.
ರಾಮ ಮಂದಿರುವು 5 ಪ್ರವೇಶದ್ವಾರಗಳನ್ನು ಹೊಂದಿರುತ್ತದೆ. ಸಿಂಗ್ ದ್ವಾರ, ನೃತ್ಯ ಮಂಡಪ್, ರಾಂಡ್ ಮಂಡಪ್, ಪೂಜಾ ಕೋಣೆ ಮತ್ತು ಪರಿಕ್ರಮದೊಂದಿಗೆ ಎಲ್ಲಾ ಪ್ರಮುಖ ಗರ್ಭ ಗೃಹ ಇರಲಿದೆ. ರಾಮ ಲಲ್ಲಾ ವಿಗ್ರಹವನ್ನು ನೆಲಮಹಡಿಯಲ್ಲಿ ಇರಿಸಲಾಗುತ್ತದೆ.
ಒಟ್ಟಿನಲ್ಲಿ ರಾಮ ಮಂದಿರ ಮೂಲ ಮಾದರಿಯಲ್ಲೇ ಇರಲಿದ್ದು ಅತ್ಯಂತ ಭವ್ಯವಾಗಿ ಕಂಗೊಳಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.