ನವದೆಹಲಿ: ಡೇಟಾ ಸ್ಥಳೀಕರಣ ಮತ್ತು ಡಿಜಿಟಲ್ ರಾಷ್ಟ್ರೀಕರಣ ಇಂದಿನ ಯುಗದ ಅವಶ್ಯಕತೆಯಾಗಿದೆ ಎಂದು ಉಲ್ಲೇಖಿಸಿ ಸ್ವದೇಶಿ ಜಾಗರಣ್ ಮಂಚ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದೆ.
“ಇತ್ತೀಚಿಗೆ ಉತ್ತರಾಖಂಡದ ಪವಿತ್ರ ನಗರ ಹರಿದ್ವಾರದಲ್ಲಿ ನಡೆದ ಸ್ವದೇಶಿ ಜಾಗರಣ್ ಮಂಚ್ ರಾಷ್ಟ್ರೀಯ ಸಭಾದಲ್ಲಿ ದತ್ತಾಂಶ ಸಾರ್ವಭೌಮತೆಯನ್ನು ಖಚಿತಪಡಿಸಿಕೊಳ್ಳಲು, ದತ್ತಾಂಶ ಸ್ಥಳೀಕರಣ ಮತ್ತು ಡಿಜಿಟಲ್ ರಾಷ್ಟ್ರೀಕರಣಕ್ಕಾಗಿ ಪ್ರಸ್ತಾಪವನ್ನು ಅಂಗೀಕರಿಸಲಾಯಿತು. ಇಂದಿನ ದಿನದ ಜಗತ್ತಿನಲ್ಲಿ ಇವುಗಳು ಅತ್ಯಂತ ಅವಶ್ಯಕವಾದವುಗಳು ಎಂಬುದು ನಮ್ಮ ದೃಢವಾದ ನಂಬಿಕೆಯಾಗಿದೆ” ಎಂದು ಸ್ವದೇಶಿ ಜಾಗರಣ್ ಮಂಚ್ ಸಹಸಂಚಾಲಕ ಅಶ್ವಿನಿ ಮಹಾಜನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಕೈಗಾರಿಕಾ ಕ್ರಾಂತಿಯಲ್ಲಿ ಡೇಟಾ ಹೊಸ ಪ್ರಮುಖ ಅಂಶವಾಗಿ ಹೊರಹೊಮ್ಮಿದೆ ಮತ್ತು ಇದನ್ನು ಅತ್ಯಂತ ಸಮರ್ಪಕ ರೀತಿಯಲ್ಲಿ ಬಳಸಿಕೊಂಡರೆ ಮನುಷ್ಯನ ಬುದ್ಧಿವಂತಿಕೆ ಮಾಡಲಾಗದ್ದನ್ನು ಇದು ಮಾಡುತ್ತದೆ” ಎಂದಿದ್ದಾರೆ.
“ನಾವು ಭಾರತೀಯರು ವಿಶ್ವದ ಆರನೇ ಒಂದರಷ್ಟು ಇದ್ದೇವೆ, ಇಂಟರ್ನೆಟ್ ಬಳಕೆಯಲ್ಲಿ ಐದನೇ ಒಂದರಷ್ಟು ಇದ್ದೇವೆ ಮತ್ತು ಡಿಜಿಟಲ್ ಬಳಕೆಯಲ್ಲಿ ನಾಲ್ಕನೇ ಒಂದರಷ್ಟು ಇದ್ದೇವೆ. ಭಾರತದ ಭೌಗೋಳಿಕ ಪ್ರದೇಶದೊಳಗೆ ನಾವು ಮಾಲೀಕರನ್ನು ಪಡೆದುಕೊಳ್ಳಬೇಕು ಮತ್ತು ದೇಶದಲ್ಲಿ ಕಂಪ್ಯೂಟರ್ ಮಾಡುವ ಅವಶ್ಯಕತೆ ನಮಗಿದೆ. ಭಾರತಕ್ಕೆ ಈ ಸಾಮರ್ಥ್ಯ ಖಂಡಿತವಾಗಿಯೂ ಇದೆ” ಎಂದಿದ್ದಾರೆ.
ಡೇಟಾ ಸ್ಥಳೀಕರಣ, ಡೇಟಾ ರಾಷ್ಟ್ರೀಕರಣ ಮತ್ತು ಡೇಟಾ ಸಾರ್ವಭೌಮತೆ ಅತಿಶೀಘ್ರದಲ್ಲೇ ವಾಸ್ತವ ಆಗುತ್ತದೆ ಎಂಬ ನಂಬಿಕೆಯನ್ನು ಸ್ವದೇಶಿ ಜಾಗರಣ ಮಂಚ್ ವ್ಯಕ್ತಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.