ನವದೆಹಲಿ: ತನ್ನ ವಿಮಾನದಲ್ಲಿ ತಾಂತ್ರಿಕ ದೋಷದಿಂದಾಗಿ 36 ಗಂಟೆಗಳ ಕಾಲ ಭಾರತದಲ್ಲಿ ಸಿಲುಕಿದ್ದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇಂದು ಅಂತಿಮವಾಗಿ ನವದೆಹಲಿಯಿಂದ ಹೊರಟಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅವರ ವಿಮಾನ ಕೆಟ್ಟುಹೋದ ಹಿನ್ನೆಲೆಯಲ್ಲಿ ಭಾನುವಾರ ಹೊರಡಬೇಕಿದ್ದ ಟ್ರೂಡೊ ಭಾರತದಲ್ಲೇ ಸಿಲುಕಿಕೊಂಡರು.
ಇಂದು ಕೆನಡಾ ಪ್ರಧಾನಿಗೆ ಬೀಳ್ಕೊಡುಗೆ ನೀಡಲು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.
ಕೆನಡಾದ ಅಧಿಕಾರಿಗಳ ಪ್ರಕಾರ, ಕೆನಡಾದ ಪ್ರಧಾನ ಮಂತ್ರಿ ಮತ್ತು ಅವರ ನಿಯೋಗಕ್ಕೆ ಭಾರದಿಂದ ನಿರ್ಗಮಿಸಲು ಬ್ಯಾಕಪ್ ವಿಮಾನವನ್ನು ಬಳಸಲಾಗಿದೆ.
ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಟ್ರುಡೊ ಸೆಪ್ಟೆಂಬರ್ 8 ರಂದು ಭಾರತಕ್ಕೆ ಆಗಮಿಸಿದರು ಮತ್ತು ಅವರ 16 ವರ್ಷದ ಮಗ ಕ್ಸೇವಿಯರ್ ಟ್ರುಡೊ ಕೂಡ ಜೊತೆಗಿದ್ದರಯ. ಉನ್ನತ ಮಟ್ಟದ G20 ಸಭೆಯ ಮುಕ್ತಾಯದ ನಂತರ ಅವರು ಕೆನಡಾಗೆ ಮರಳಬೇಕಿತ್ತು ಆದರೆ ಅವರ ಏರ್ಬಸ್ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರು ಭಾರತದಲ್ಲೇ ಉಳಿಯಬೇಕಾಯಿತು.
“ಪಿಎಂ ನರೇಂದ್ರ ಮೋದಿ ಮತ್ತು ಸರ್ಕಾರದ ನನ್ನ ಸಹೋದ್ಯೋಗಿಗಳ ಪರವಾಗಿ ಜಿ 20 ಶೃಂಗಸಭೆಯಲ್ಲಿ ಹಾಜರಿದ್ದ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರಿಗೆ ಧನ್ಯವಾದ ಹೇಳಲು ಇಂದು ವಿಮಾನ ನಿಲ್ದಾಣಕ್ಕೆ ಬಂದಿದ್ದೇನೆ ಮತ್ತು ಅವರು ಮತ್ತು ಅವರ ಪರಿವಾರದವರಿಗೆ ಸುರಕ್ಷಿತವಾಗಿ ಮನೆಗೆ ಮರಳಿ ಎಂದು ಹಾರೈಸಿದೆ” ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವಿಟ್ ಮಾಡಿದ್ದಾರೆ.
On behalf of PM @narendramodi Ji and my colleagues in govt, I was at the airport today to thank Mr. Justin Trudeau, Hon’ble Prime Minister of Canada @JustinTrudeau for his presence at the #G20Summit and wished him and his entourage a safe trip back home. 🇮🇳 🇨🇦 pic.twitter.com/8gEg694YCs
— Rajeev Chandrasekhar 🇮🇳 (@Rajeev_GoI) September 12, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.