ಶ್ರೀನಗರ: ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮಂಗಳವಾರ ಕುಲ್ಗಾಮ್ ಜಿಲ್ಲೆಯಲ್ಲಿ ಹಿಂದೂ ಶಾಲೆಯ ಶಿಕ್ಷಕಿಯ ಹತ್ಯೆಗೆ ಸಂತಾಪ ಸೂಚಿಸಿದ್ದಾರೆ ಮತ್ತು ಆಕೆಯ ಹಂತಕರಿಗೆ ಮರೆಯಲಾಗದ ಪ್ರತಿಕ್ರಿಯೆ ನೀಡುವುದಾಗಿ ಭರವಸೆ ನೀಡಿದ್ದಾರೆ.
“ಶಾಲಾ ಶಿಕ್ಷಕಿ ರಜನಿ ಬಾಲಾ ಮೇಲೆ ನಡೆದ ಉಗ್ರರ ದಾಳಿ ಅತ್ಯಂತ ಖಂಡನೀಯ. ಅಗಲಿದ ಕುಟುಂಬಕ್ಕೆ ನನ್ನ ಸಂತಾಪ. ಭೀಕರ ದಾಳಿಗೆ ಭಯೋತ್ಪಾದಕರು ಮತ್ತು ಅವರ ಸಹಾನುಭೂತಿ ಹೊಂದಿರುವವರಿಗೆ ಮರೆಯಲಾಗದ ಪ್ರತಿಕ್ರಿಯೆ ನೀಡಲಾಗುವುದು” ಎಂದು ಮನೋಜ್ ಸಿನ್ಹಾ ಹೇಳಿದ್ದಾರೆ.
ಮಂಗಳವಾರ ಕುಲ್ಗಾಮ್ ಜಿಲ್ಲೆಯಲ್ಲಿ ಕೆಲವು ಭಯೋತ್ಪಾದಕರು ಜಮ್ಮುವಿನ ಹಿಂದೂ ಮಹಿಳಾ ಶಿಕ್ಷಕಿಯನ್ನು ಗುಂಡಿಕ್ಕಿ ಕೊಂದ ಬೆನ್ನಲ್ಲೇ ಅವರು ಈ ಎಚ್ಚರಿಕೆ ನೀಡಿದ್ದಾರೆ.
ಸಾಂಬಾ ಜಿಲ್ಲೆಗೆ ಸೇರಿದ ಆದರೆ ಕುಲ್ಗಾಮ್ನ ಗೋಪಾಲ್ಪೋರಾದ ಸರ್ಕಾರಿ ಶಾಲೆಯಲ್ಲಿ ನೇಮಕಗೊಂಡಿದ್ದ ರಜನಿ ಬಾಲಾ (36) ಹತ್ಯೆಯು ಮೇ ತಿಂಗಳಲ್ಲಿ ನಡೆದ ಮುಸ್ಲಿಮೇತರ ಸರ್ಕಾರಿ ನೌಕರರ ಎರಡನೇ ಹತ್ಯೆಯಾಗಿದೆ ಮತ್ತು ಈ ತಿಂಗಳು ಕಾಶ್ಮೀರದಲ್ಲಿ ಏಳನೇ ಉದ್ದೇಶಿತ ಹತ್ಯೆಯಾಗಿದೆ.
Terrorist attack on a school teacher, Rajni Bala is the most reprehensible act. My deepest condolences to the bereaved family. Terrorists and their sympathizers will be given unforgettable response for dastardly attack: J&K Lt Governor Manoj Sinha
(File photo) pic.twitter.com/niaxb61OiG
— ANI (@ANI) May 31, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.