ಅಂಬಾಲಾ: ಮೋದಿಯ ಭಾರತ ನೀಡುವ ಭಾರತವಾಗಿದೆ, ಕೇವಲ ತೆಗೆದುಕೊಳ್ಳುವ ಭಾರತ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಹೇಳಿದ್ದಾರೆ.
ದೇಶದ ಆರೋಗ್ಯ ಕ್ಷೇತ್ರ ಮತ್ತು ಕೋವಿಡ್ ಲಸಿಕೆಗಳ ಆಂತರಿಕ ಅಭಿವೃದ್ಧಿಯನ್ನು ಶ್ಲಾಘಿಸಿದ ಅವರು, ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಬದಲಾಗುತ್ತಿರುವ ರಾಷ್ಟ್ರವಾಗಿದೆ, ಅದು ಈಗ ಜಗತ್ತಿಗೆ ಏನನ್ನಾದರೂ ಕೊಡುತ್ತಲೇ ಇದೆ. ಕೇವಲ ತೆಗೆದುಕೊಳ್ಳುವ ರಾಷ್ಟ್ರವಾಗಿ ಉಳಿದಿಲ್ಲ ಎಂದಿದ್ದಾರೆ.
72 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾದ ಅಟಲ್ ಕ್ಯಾನ್ಸರ್ ಕೇರ್ ಸೆಂಟರ್ ಅನ್ನು ಉದ್ಘಾಟಿಸಿದ ನಡ್ಡಾ, ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತಂದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ. ಪ್ರಧಾನಿ ಮೋದಿಯವರು ದೇಶದ 130 ಕೋಟಿ ಜನರನ್ನು ಕೊರೋನಾವೈರಸ್ನಿಂದ ರಕ್ಷಿಸಿದ್ದಾರೆ ಎಂದು ನಡ್ಡಾ ಹೇಳಿದದ್ದಾರೆ.
ಹಿಂದಿನ ಸರ್ಕಾರಗಳ ಅಡಿಯಲ್ಲಿ ಚಿಕನ್ ಗುನ್ಯಾ ಮತ್ತು ಪೋಲಿಯೊದಂತಹ ರೋಗಗಳಿಗೆ ಲಸಿಕೆಗಳು ಭಾರತವನ್ನು ತಲುಪಲು ಹಲವು ವರ್ಷಗಳನ್ನೇ ತೆಗೆದುಕೊಂಡಿತು ಎಂದಿದ್ದಾರೆ.
2020 ರ ಜನವರಿಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವು ಭಾರತವನ್ನು ಅಪ್ಪಳಿಸಿದಾದ, ಮೋದಿ ಸರ್ಕಾರವು ಕಾರ್ಯಪಡೆಯನ್ನು ಸ್ಥಾಪಿಸಿತು ಮತ್ತು ಒಂಬತ್ತು ತಿಂಗಳೊಳಗೆ ಎರಡು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಯಿತು ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.