ನವದೆಹಲಿ: ಉಕ್ರೇನ್ನ ಮೇಲೆ ರಷ್ಯಾದ ಆಕ್ರಮಣ ಮತ್ತು ಯುದ್ಧದಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು “ಆಪರೇಷನ್ ಗಂಗಾ” ಅಡಿಯಲ್ಲಿ ಭಾರತ ಸಾಧಿಸಿದ ಪ್ರಗತಿಯ ಕುರಿತು ಮತ್ತು ವಿಶ್ವಸಂಸ್ಥೆಯಲ್ಲಿನ ನಿರ್ಣಯಗಳ ಮೇಲಿನ ಮತದಾನದಿಂದ ಭಾರತ ಏಕೆ ದೂರ ಸರಿಯಿತು ಎಂಬುದನ್ನು ಮೋದಿ ಸರ್ಕಾರ ಇಂದು ಪ್ರತಿಪಕ್ಷಗಳಿಗೆ ವಿವರಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂದು ನಡೆಸಿದ ಸಮಾಲೋಚನಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆನಂದ್ ಶರ್ಮಾ ಮತ್ತು ಶಶಿ ತರೂರ್, ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಮತ್ತು ಆರ್ಎಲ್ಡಿ ನಾಯಕ ಪಿ ಸಿ ಗುಪ್ತಾ ಸೇರಿದಂತೆ ಪ್ರತಿಪಕ್ಷ ನಾಯಕರು ಉಪಸ್ಥಿತರಿದ್ದರು.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಹಿರಿಯ ಎಂಇಎ ಅಧಿಕಾರಿಗಳು ಉಕ್ರೇನ್ನಲ್ಲಿ ನಡೆಯುತ್ತಿರುವ ರಷ್ಯಾದ ಮಿಲಿಟರಿ ದಾಳಿಯ ಕುರಿತು ಸಭೆಗೆ ವಿವರಿಸಿದರು.
“ಉಕ್ರೇನ್ನಲ್ಲಿನ ಬೆಳವಣಿಗೆಗಳ ಕುರಿತು ವಿದೇಶಾಂಗ ಸಚಿವಾಲಯದ ಸಲಹಾ ಸಮಿತಿಯ ಸಭೆಯನ್ನು ಈಗಷ್ಟೇ ಪೂರ್ಣಗೊಳಿಸಲಾಗಿದೆ. ಸಮಸ್ಯೆಯ ಕಾರ್ಯತಂತ್ರ ಮತ್ತು ಮಾನವೀಯ ಅಂಶಗಳ ಕುರಿತು ಉತ್ತಮ ಚರ್ಚೆ ನಡೆದಿದೆ. ಉಕ್ರೇನ್ನಿಂದ ಎಲ್ಲಾ ಭಾರತೀಯರನ್ನು ಮರಳಿ ಕರೆತರುವ ಪ್ರಯತ್ನಗಳಿಗೆ ಬಲವಾದ ಬೆಂಬಲಮತ್ತು ಸರ್ವಾನುಮತದ ಸಂದೇಶ ನೀಡಲಾಗಿದೆ”ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಯುಎನ್ನಲ್ಲಿ ಮತದಾನದಿಂದ ದೂರವಿರಲು ಸರ್ಕಾರದ ನಿರ್ಧಾರವನ್ನು ಪ್ರತಿಪಕ್ಷದ ಸದಸ್ಯರು ಅನುಮೋದಿಸಿದ್ದಾರೆ ಎಂದು ತಿಳಿದುಬಂದಿದೆ.
Just completed a MEA consultative committee meeting on developments in Ukraine.
A good discussion on the strategic and humanitarian aspects of the issue.
Strong and unanimous message of support for efforts to bring back all Indians from Ukraine. pic.twitter.com/QU6I7wtr6d
— Dr. S. Jaishankar (@DrSJaishankar) March 3, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.