ನವದೆಹಲಿ: ಜನೌಷಧಿ ಜೆನೆರಿಕ್ ಔಷಧಿಗಳ ಪ್ರಯೋಜನದ ಬಗ್ಗೆ ಜಾಗೃತಿ ಮೂಡಿಸಲು ಜನೌಷಧಿ ರಥ, ಜನೌಷಧಿ ಸಂಚಾರಿ ವಾಹನಗಳು ಮತ್ತು ಜನೌಷಧಿ ಇ-ರಿಕ್ಷಾಗಳಿಗೆ ಕೇಂದ್ರ ಸಚಿವ ಭಗವಂತ ಖೂಬಾ ಚಾಲನೆ ನೀಡಿದರು.
ದೇಶಾದ್ಯಂತ ನಡೆಯುತ್ತಿರುವ ಸಪ್ತಾಹದ ಅಂಗವಾಗಿ ನವದೆಹಲಿಯಿಂದ ಜನೌಷಧಿ ರಥ, ಜನೌಷಧಿ ಸಂಚಾರಿ ವಾಹನಗಳು ಮತ್ತು ಜನೌಷಧಿ ಇ-ರಿಕ್ಷಾಗಳಿಗೆ ಚಾಲನೆ ನೀಡಿದರು.
ಜನೌಷಧಿ ರಥವು 7 ದಿನಗಳ ಕಾಲ 4-5 ರಾಜ್ಯಗಳಲ್ಲಿ ಸಂಚರಿಸಲಿದ್ದರೆ, ಸಂಚಾರಿ ವಾಹನಗಳು ಮತ್ತು ಇ-ರಿಕ್ಷಾಗಳು ಮಾರ್ಚ್ 7 ರವರೆಗೆ ದೆಹಲಿಯಾದ್ಯಂತ ಸಂಚರಿಸಿ ಎಲ್ಲರಿಗೂ ಕೈಗೆಟಕುವ ದರದಲ್ಲಿ ಲಭ್ಯವಿರುವ ಪರಿಯೋಜನೆ ಮತ್ತು ಜನೌಷಧಿ ಜೆನೆರಿಕ್ ಔಷಧಿಗಳ ಪ್ರಯೋಜನಗಳ ಕುರಿತಂತೆ ಬೇರುಮಟ್ಟದಲ್ಲಿ ಜಾಗೃತಿ ಮೂಡಿಸಲಿವೆ.
ಜನೌಷಧಿ ದಿನದ ಆಚರಣೆಯ 2 ನೇ ದಿನವಾದ ಇಂದು, ದೇಶದ ಮಹಿಳೆಯರನ್ನು ಗೌರವಿಸಲು ದೇಶದಾದ್ಯಂತ 75 ಸ್ಥಳಗಳಲ್ಲಿ ಮಾತೃ ಶಕ್ತಿ ಸಮ್ಮಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, ಮಹಿಳೆಯರು ಬಳಸಬಹುದಾದ ಜನ್ ಔಷಧಿಯ ವಿವಿಧ ವಸ್ತುಗಳನ್ನು ಒಳಗೊಂಡ ಉಡುಗೊರೆಯ ಪೊಟ್ಟಣಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮಗಳಲ್ಲಿ ಮಹಿಳಾ ಮುಖಂಡರು, ನಗರ ಮೇಯರ್ ಗಳು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಸಮಾಜದ ವಿವಿಧ ಕ್ಷೇತ್ರಗಳ ಪ್ರತಿಷ್ಠಿತ ಮಹಿಳೆಯರು ಭಾಗವಹಿಸಿದ್ದರು.
ಭಾರತದ ಸ್ವಾತಂತ್ರ್ಯದ 75 ವರ್ಷಗಳ ಅಂಗವಾಗಿ ನಡೆಯುತ್ತಿರುವ ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಈ ವರ್ಷದ ಎಲ್ಲಾ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.