ನವದೆಹಲಿ: ಅಫ್ಘಾನಿಸ್ಥಾನದ ಜನರಿಗಾಗಿ ಭಾರತ ಅಗತ್ಯ ನೆರವುಗಳನ್ನು ಒದಗಿಸುತ್ತಿದೆ. ಅಫ್ಘಾನ್ ಅನ್ನು ತಾಲಿಬಾನ್ ವಶಪಡಿಸಿಕೊಂಡರೂ ಭಾರತ ಮಾತ್ರ ಅಲ್ಲಿನ ಜನರ ಸಂಕಷ್ಟಕ್ಕೆ ಸ್ಪಂದಿಸಿ ತನ್ನಿಂದಾದ ಸಹಾಐಹಸ್ತ ಚಾಚುತ್ತಿದೆ. ಇದೀಗ ಭಾರತದಿಂದ 10,000 ಟನ್ ಗೋಧಿಯ ಮೊದಲ ಸಾಗಣೆ ಇಂದು ಅಟ್ಟಾರಿ-ವಾಘಾ ಭೂ ಗಡಿಯ ಮೂಲಕ ಅಫ್ಘಾನ್ಗೆ ರವಾನೆಯಾಗಲಿದೆ.
“ಅಫ್ಘಾನಿಸ್ಥಾನದ ಜನರಿಗೆ ಭಾರತದಿಂದ 10,000 ಟನ್ ಗೋಧಿಯ ಮೊದಲ ಸಾಗಣೆಯನ್ನು ಇಂದು ಅಟ್ಟಾರಿ-ವಾಘಾ ಭೂ ಗಡಿಯ ಮೂಲಕ ರವಾನಿಸಲಾಗುತ್ತದೆ. ಮುಂಬರುವ ವಾರಗಳಲ್ಲಿ ಹೆಚ್ಚಿನ ಆಹಾರ ಸರಬರಾಜು ಮತ್ತು ಇತರ ಮಾನವೀಯ ನೆರವು ನೀಡಲಾಗುತ್ತದೆ” ಎಂದು ಮೂಲಗಳು ತಿಳಿಸಿವೆ.
ಭಾರತ ಮತ್ತು ಪಾಕಿಸ್ಥಾನದ ಅಧಿಕಾರಿಗಳು ಮತ್ತು ಪ್ರತಿನಿಧಿಗಳ ಸಮ್ಮುಖದಲ್ಲಿ ಅಟ್ಟಾರಿ-ವಾಘಾದಲ್ಲಿ ಮೊದಲ ಸಾಗಣೆಯನ್ನು ಔಪಚಾರಿಕವಾಗಿ ಚಾಲನೆ ಮಾಡಲಾಗುವುದು ಎಂದು ಭಾರತದ ವಿಶ್ವ ಆಹಾರ ಕಾರ್ಯಕ್ರಮದ (ಡಬ್ಲ್ಯುಎಫ್ಪಿ) ಪ್ರತಿನಿಧಿ ಮತ್ತು ಡೈರೆಕ್ಟರ್ ಬಿಶೋ ಪರಾಜುಲಿ ತಿಳಿಸಿದ್ದಾರೆ.
ವಾರಗಳ ಮಾತುಕತೆಯ ನಂತರ ಭಾರತ ಮತ್ತು ಪಾಕಿಸ್ಥಾನದ ಕಡೆಯವರು ಪಾಕಿಸ್ಥಾನದ ಭೂ ಮಾರ್ಗಗಳ ಮೂಲಕ ಗೋಧಿಯನ್ನು ಸಾಗಿಸುವ ವಿಧಾನಗಳನ್ನು ಅಂತಿಮಗೊಳಿಸಿದ ನಂತರ ಸಾಗಣೆಯನ್ನು ಕಳುಹಿಸಲಾಗುತ್ತಿದೆ.
ಭಾರತ ಸರ್ಕಾರದ ನೆರವು ಅತ್ಯಂತ ಶ್ಲಾಘನೀಯ ಎಂದು ಬಿಶೋ ಪರಾಜುಲಿ ಶ್ಲಾಘಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.