ನವದೆಹಲಿ : ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದ ಗೌಡ ಅವರು, ‘ಪ್ರಾಜೆಕ್ಟ್ಸ್ ಅಂಡ್ ಡೆವಲಪ್ಮೆಂಟ್ ಇಂಡಿಯಾ ಲಿಮಿಟೆಡ್’ನ(ಪಿಡಿಐಎಲ್) ಹಣಕಾಸು ನಿರ್ದೇಶಕ ಡಿ.ಎಸ್. ಸುಧಾಕರ್ ರಾಮಯ್ಯ ಅವರಿಂದ 2019-20ನೇ ಸಾಲಿನ 9.55 ಕೋಟಿ ರೂ. ಲಾಭಾಂಶ ಮತ್ತು 2020-21ನೇ ಸಾಲಿನ 6.93 ಕೋಟಿ ರೂ. ಮಧ್ಯಂತರ ಲಾಭಾಂಶವನ್ನು ಸ್ವೀಕರಿಸಿದರು. ಈ ಸಂದರ್ಭ ರಸಗೊಬ್ಬರ ಸಚಿವಾಲಯದ ಕಾರ್ಯದರ್ಶಿಗಳಾದ ಆರ್.ಕೆ. ಚತುರ್ವೇದಿ, ಜಂಟಿ ಕಾರ್ಯದರ್ಶಿಗಳಾದ ಶ್ರೀಮತಿ ಅಪರ್ಣಾ ಶರ್ಮ ಮತ್ತು ಪಿಡಿಐಎಲ್ನ ಹಿರಿಯ ಅಕಾರಿಗಳು ಉಪಸ್ಥಿತರಿದ್ದರು.
2019-20ನೇ ಸಾಲಿನಲ್ಲಿ ಪಿಡಿಐಎಲ್ ಅತ್ಯಧಿಕ ಆರ್ಥಿಕ ಕಾರ್ಯದಕ್ಷತೆ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಅಂದರೆ, ಈ ಸಾಲಿನಲ್ಲಿ ತನ್ನ ಕಾರ್ಯಾಚರಣೆ ಮೂಲಕ ಸಂಸ್ಥೆಯು 133.01 ಕೋಟಿ ರೂ. ಆದಾಯ ಗಳಿಸಿದೆ. ಈ ಅವಯಲ್ಲಿ 142.16 ಕೋಟಿ ರೂ. ಒಟ್ಟು ಆದಾಯ, 41.86 ಕೋಟಿ ರೂ. ತೆರಿಗೆ ಪೂರ್ವ ಲಾಭ ಮತ್ತು 31.83 ಕೋಟಿ ರೂ. ತೆರಿಗೆ ನಂತರದ ಲಾಭವನ್ನು ಸಂಸ್ಥೆ ಗಳಿಸಿದೆ.
ಪಿಡಿಐಎಲ್ ಪ್ರಸ್ತುತ ‘ಹೆಚ್ಯುಆರ್ಎಲ್’ನ ಮೂರು ಪ್ರಮುಖ ಯೋಜನೆಗಳು, ತೆಲ್ಚರ್ ಯೋಜನೆಗೆ ಯೋಜನಾ ನಿರ್ವಹಣೆ ಸಲಹೆ (ಪಿಎಂಸಿ) ಸೇವೆಗಳನ್ನು ಒದಗಿಸುತ್ತಿದೆ. ಜೊತೆಗೆ, ತೈಲ ಮತ್ತು ಅನಿಲ ವಲಯದ ಇತರೆ ಕಾರ್ಯಾದೇಶಗಳನ್ನೂ ಸಂಸ್ಥೆಯು ಅನುಷ್ಠಾನಗೊಳಿಸುತ್ತಿದೆ.
ಪಿಡಿಐಎಲ್ ಒಂದು ‘ಮಿನಿ ರತ್ನ’, ವರ್ಗ-1ಕ್ಕೆ ಸೇರಿದ ಪ್ರತಿಷ್ಠಿತ ವಿನ್ಯಾಸ ಎಂಜಿನಿಯರಿಂಗ್ ಮತ್ತು ಸಲಹಾ ಸಂಸ್ಥೆಯಾಗಿದೆ. ಯೋಜನಾಪೂರ್ವ ಚಟುವಟಿಕೆಗಳು, ಯೋಜನಾ ನಿರ್ವಹಣೆ ಸಲಹೆ, ವಿನ್ಯಾಸ ಮತ್ತು ಎಂಜಿನಿಯರಿಂಗ್, ಗುಣಮಟ್ಟ ಖಾತರಿ ಸೇವೆಗಳನ್ನು ಸಂಸ್ಥೆಯು ಒದಗಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.