ನವದೆಹಲಿ: ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ನಿನ್ನೆ ಒಡಿಶಾ ಕರಾವಳಿಯಲ್ಲಿನ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನಿಂದ ಆಕಾಶ್-ಎನ್ಜಿ (ನ್ಯೂ ಜನರೇಷನ್) ಕ್ಷಿಪಣಿಯ ಮೊದಲ ಪರಿಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ.
ಆಕಾಶ್-ಎನ್ಜಿ ಹೊಸ ತಲೆಮಾರಿನ ವಾಯು ಕ್ಷಿಪಣಿಯಾಗಿದ್ದು, ಭಾರತೀಯ ವಾಯುಪಡೆಯು ಹೆಚ್ಚಿನ ಆರ್ಸಿಎಸ್ ವೈಮಾನಿಕ ಬೆದರಿಕೆಗಳನ್ನು ತಡೆಯುವ ಉದ್ದೇಶದಿಂದ ಇದನ್ನು ಸೇರ್ಪಡೆಗೊಳಿಸಿದೆ. ಪ್ರಯೋಗದ ವೇಳೆ ಇದು ಅತ್ಯಂತ ನಿಖರತೆಯೊಂದಿಗೆ ಕ್ಷಿಪಣಿ ಗುರಿಯನ್ನು ತಡೆದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಪ್ರಯೋಗದ ವೇಳೆ ಕ್ಷಿಪಣಿಯು ಎಲ್ಲಾ ಪರೀಕ್ಷಾ ಉದ್ದೇಶಗಳನ್ನು ಪೂರೈಸಿದೆ. ಕಮಾಂಡ್ ಮತ್ತು ಕಂಟ್ರೋಲ್ ಸಿಸ್ಟಮ್, ಆನ್ಬೋರ್ಡ್ ಏವಿಯಾನಿಕ್ಸ್ ಮತ್ತು ಕ್ಷಿಪಣಿಯ ವಾಯುಬಲವೈಜ್ಞಾನಿಕ ಸಂರಚನೆಯ ಕಾರ್ಯಕ್ಷಮತೆಯನ್ನು ಪ್ರಯೋಗದ ಸಮಯದಲ್ಲಿ ಯಶಸ್ವಿಯಾಗಿ ಮೌಲ್ಯೀಕರಿಸಲಾಗಿದೆ. ಸಿಸ್ಟಮ್ನೊಂದಿಗೆ ಏಕೀಕರಣದ ಸಾಮರ್ಥ್ಯಕ್ಕಾಗಿ ಮಲ್ಟಿ ಫಂಕ್ಷನ್ ರಾಡಾರ್ ಅನ್ನು ಪರೀಕ್ಷಿಸಲಾಗಿದೆ.
ಇದೇ ರೀತಿಯ ಇತರ ವ್ಯವಸ್ಥೆಗಳಿಗೆ ಹೋಲಿಸಿದರೆ ಆಕಾಶ್-ಎನ್ಜಿ ವ್ಯವಸ್ಥೆಯನ್ನು ಉತ್ತಮ ನಿಯೋಜನೆಯೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಸಾಧನೆಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್ಡಿಒ, ಬಿಇಎಲ್ ಮತ್ತು ಭಾರತೀಯ ವಾಯುಪಡೆಯ ತಂಡವನ್ನು ಅಭಿನಂದಿಸಿದ್ದಾರೆ. ಆಕಾಶ್ ಎನ್ಜಿ ಕ್ಷಿಪಣಿಯ ಯಶಸ್ವಿ ಹಾರಾಟ ಪ್ರಯೋಗಕ್ಕಾಗಿ ಡಿಆರ್ಡಿಒ ಅಧ್ಯಕ್ಷ ಡಾ.ಜಿ.ಸತೀಶ್ ರೆಡ್ಡಿ ತಂಡವನ್ನು ಅಭಿನಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.