ತಿರುವನಂತಪುರಂ: ಕೇರಳದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಗಳಿಸಿದ ನಂತರ ಸಿಪಿಎಂ ಗೂಂಡಾಗಳು ವಿಕೃತಿಯನ್ನು ಮೆರೆದಿದ್ದಾರೆ. ಬಿಜೆಪಿಯು ಚುನಾವಣೆಯಲ್ಲಿ ಅತ್ಯುತ್ತಮ ಪ್ರದರ್ಶನದ ನೀಡಿರುವುದನ್ನು ಸಹಿಸದ ಸಿಪಿಎಂ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಪಕ್ಷದ ಕಚೇರಿಗಳನ್ನು ನಾಶಮಾಡಲು ಪ್ರಯತ್ನಿಸಿದ್ದಾರೆ. ಇಂತಹ ಹಿಂಸಾತ್ಮಕ ಘಟನೆಗಳು ರಾಜ್ಯದ ಎಲ್ಲೆಡೆಯೂ ವರದಿಯಾಗಿವೆ.
ಸಿಪಿಎಂನ ಭದ್ರಕೋಟೆಯಾದ ಕಾಸರಗೋಡು ಜಿಲ್ಲೆಯ ಕಾಂಜಂಗಾಡಿನಲ್ಲಿ ಬಿಜೆಪಿ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ಅರಯಿ ಕಾರ್ತಿಕಾ ಮತ್ತು ಅರಯಿ ಪಲಕ್ಕಲ್ನಲ್ಲಿನ ಕಚೇರಿಗಳನ್ನು ಸಿಪಿಎಂ ಗೂಂಡಾಗಳ ಗುಂಪೊಂದು ಧ್ವಂಸಗೊಳಿಸಿದೆ. ಬಾಗಿಲುಗಳು ಮತ್ತು ಕಿಟಕಿಗಳು ಮುರಿದು ಕಚೇರಿಗಳೊಳಗಿನ ಎಲ್ಲಾ ವಸ್ತುಗಳು ನಾಶ ಮಾಡಲಾಗಿದೆ. ಪಕ್ಷದ ಕಚೇರಿಯೊಳಗಿದ್ದ ಬಿಜೆಪಿಯ ಇಬ್ಬರು ಕಾರ್ಯಕರ್ತರ ಮೇಲೆ ಕ್ರೂರವಾಗಿ ಹಲ್ಲೆ ಮಾಡಲಾಗಿದೆ. ಬಿಜೆಪಿ ಮುಖಂಡ ಉಮನಾಥ ರಾವ್ ಅವರ ಪುತ್ರಿ ಪ್ರಸನ್ನ ಟೀಚರ್ ಮನೆ ಮೇಲೆ ಸಿಪಿಎಂ ಗೂಂಡಾಗಳು ಕಲ್ಲು ತೂರಾಟ ನಡೆಸಿದ್ದಾರೆ. ನೆಲ್ಲಿಕ್ಕತ್ತಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಧವನ್ ಅವರ ಮನೆಯೊಳಗೆ ಸಿಪಿಎಂ ಕಾರ್ಯಕರ್ತರು ಪಟಾಕಿ ಎಸೆದಿದ್ದು, ಮಾಧವನ್ ಅವರ ಪತ್ನಿ ಗಾಯಗೊಂಡಿದ್ದಾರೆ.
ಅಪ್ಪಟ್ಟಿ ಮತ್ತು ಪುತಿಯಕೋಟ್ಟದಲ್ಲೂ ಇದೇ ರೀತಿಯ ದಾಳಿಗಳು ನಡೆದಿವೆ. ಸಿಪಿಎಂ ವಿಜಯ ಮೆರವಣಿಗೆಗಳನ್ನು ಬಿಜೆಪಿ ವಿರೋಧಿ ದಾಳಿಗಳನ್ನು ನಡೆಸಲು ಬಳಸಲಾಗಿದೆ.
ಬಿಜೆಪಿ ಕೇರಳದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿದೆ ಮತ್ತು ಕಣ್ಣೂರು ಮತ್ತು ಕಾಸರಗೋಡಿನ ಸಿಪಿಎಂನ ಭದ್ರಕೋಟೆಗಳಲ್ಲಿ ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಬದಲು ಬಿಜೆಪಿ ಮುಖ್ಯ ವಿರೋಧ ಪಕ್ಷವಾಗಿ ಕೇರಳದಲ್ಲಿ ಹೊರಹೊಮ್ಮುವ ಬಗ್ಗೆ ಸಿಪಿಎಂ ಹೆದರುತ್ತಿದೆ. ಆದ್ದರಿಂದ ಕೇರಳದಲ್ಲಿ ಕೇಸರಿ ಬೆಳವಣಿಗೆಯನ್ನು ವಿರೋಧಿಸಲು ಪಕ್ಷವು ಹಿಂಸಾತ್ಮಕ ವಿಧಾನಗಳನ್ನು ಅನುಸರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.