ನವದೆಹಲಿ: ಅಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವವನ್ನು ನೀಡುವ ಪೌರತ್ವ ತಿದ್ದುಪಡಿ ಕಾಯ್ದೆಗೆ ತಮ್ಮ ಬೆಂಬಲವನ್ನು ಸೂಚಿಸಲು ಸುಪ್ರೀಂ ಕೋರ್ಟ್ನ ವಕೀಲರ ಗುಂಪು ಬುಧವಾರ ಸುಪ್ರೀಂ ಕೋರ್ಟ್ನ ಹೊರಗೆ ರಾಷ್ಟ್ರೀಯ ಹಾಡು ವಂದೇ ಮಾತರಂ ಅನ್ನು ಹಾಡಿದೆ.
ಮಂಗಳವಾರ, ಪ್ರಶಾಂತ್ ಭೂಷಣ್, ಕಾಮಿನಿ ಜೈಸ್ವಾಲ್ ಸೇರಿದಂತೆ ಇತರ ಸುಪ್ರೀಂ ಕೋರ್ಟ್ನ ವಕೀಲರು ಸಿಎಎಯನ್ನು ವಿರೋಧಿಸಲು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಜನರಿಗೆ ನೆನಪಿಸಲು ಸಂವಿಧಾನದ ಮುನ್ನುಡಿಯನ್ನು ಓದಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ಸಿಎಎ ವಿರೋಧಿ ವಕೀಲರಿಗೆ ಸೆಡ್ಡು ಹೊಡೆಯುವ ಸಲುವಾಗಿ ವಕೀಲರ ಗುಂಪು ಸಿಎಎಗೆ ಬೆಂಬಲವಾಗಿ ‘ವಂದೇ ಮಾತರಂ’ ಹಾಡಿದ್ದಾರೆ.
ಈ ಕಾಯ್ದೆಯನ್ನು ಕಳೆದ ವರ್ಷ ಡಿಸೆಂಬರ್ನಲ್ಲಿ ಸಂಸತ್ತು ಅಂಗೀಕರಿಸಿತು ಮತ್ತು ಡಿಸೆಂಬರ್ 12 ರಂದು ರಾಷ್ಟ್ರಪತಿಗಳ ಅನುಮತಿಯನ್ನು ಪಡೆಯಿತು. ಮೂರು ನೆರೆಯ ಇಸ್ಲಾಮಿಕ್ ರಾಷ್ಟ್ರಗಳ ಧಾರ್ಮಿಕ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಕಾನೂನು ದೇಶಾದ್ಯಂತ ಭಾರೀ ಪ್ರತಿಭಟನೆಗಳನ್ನು ಎದುರಿಸಿತ್ತು.
A group of SC advocates sing ‘Vande Mataram” at the SC lawns in support of Citizenship Amendment Act . This a counter to lawyers led by Bhushan, Kamni Jaiswal who yesterday read preamble as a “unique” way to oppose CAA and protest “trampling of constitutional values”. pic.twitter.com/QxGmTGLShM
— harish v nair (@harishvnair1) January 8, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.