ನವದೆಹಲಿ: ಐಐಟಿ ಗಾಂಧಿನಗರದ ಹ್ಯುಮಾನಿಟೀಸ್ ಅಂಡ್ ಸೋಶಿಯಲ್ ಸೈನ್ಸಸ್ ವಿಭಾಗವು ಭಾರತೀಯ ಜ್ಞಾನ ವ್ಯವಸ್ಥೆಯ ನಾಲ್ಕನೇ ಆವೃತ್ತಿಯ ಸೆಮಿಸ್ಟರ್ ಕೋರ್ಸ್ ಅನ್ನು ಜನವರಿಯಿಂದ ಏಪ್ರಿಲ್ ತಿಂಗಳವರೆಗೆ ನಡೆಸಲಿದೆ. ಈ ವರ್ಷ ‘ಪ್ರಾಚೀನ ಭಾರತದ ಐಡಿಯಾ’ ಎಂಬ ವಿಷಯದೊಂದಿಗೆ ಇದನ್ನು ನಡೆಸಲಾಗುತ್ತಿದೆ. ಇದು ಪ್ರಾಚೀನ ಭಾರತದ ಬೌದ್ಧಿಕ, ವೈಜ್ಞಾನಿಕ ಮತ್ತು ಕಲಾತ್ಮಕ ಜ್ಞಾನ ಸಂಪ್ರದಾಯಗಳು ಮತ್ತು ಪ್ರಾಚೀನ ಭಾರತೀಯ ಸಮಾಜದ ವ್ಯಾಪಕವಾದ ಪರಿಚಯವನ್ನು ನೀಡಲಿದೆ.
ಕೋರ್ಸ್ ಜನವರಿ 9, 2020 ರಿಂದ ಪ್ರಾರಂಭವಾಗಲಿದೆ. ಐಐಟಿ ಗಾಂಧಿನಗರದ ಕೋರ್ಸ್ ಸಂಯೋಜಕರಾದ ಪ್ರೊಫೆಸರ್ ಮೈಕೆಲ್ ಡಾನಿನೋ ಮತ್ತು ಮನ ಷಾ ಅವರೊಂದಿಗೆ ಭಾರತ ಮತ್ತು ವಿದೇಶಗಳ ಎಂಟು ಪ್ರಖ್ಯಾತ ವಿದ್ವಾಂಸರು ಒಟ್ಟಾಗಿ ಕೋರ್ಸ್ ಅನ್ನು ಕಲಿಸಲಿದ್ದಾರೆ.
‘ಪ್ರಾಚೀನ ಭಾರತದ ಐಡಿಯಾ’ ಕುರಿತಾದ ಕೋರ್ಸ್ ಭಾರತದಾದ್ಯಂತ ಪರಿಕಲ್ಪನೆಗಳು ಮತ್ತು ವಾಸ್ತುಶಿಲ್ಪದ ಅಭ್ಯಾಸಗಳಂತಹ ವಿವಿಧ ವಿಷಯಗಳ ಬಗ್ಗೆ ಆಂತರಿಕ ದೃಷ್ಟಿಕೋನವನ್ನು ಒದಗಿಸಲಿದೆ. ಭಾರತದ ಬಗ್ಗೆ ವಿದೇಶಿ ಪ್ರವಾಸಿಗರ ದೃಷ್ಟಿಕೋನಗಳು, ಭಾರತದ ಸಂಪ್ರದಾಯ, ಮೂರ್ತಿ ಪೂಜೆ ಮತ್ತು ಬೌದ್ಧಿಕ ಸಂಪ್ರದಾಯಗಳು, ಸಂಸ್ಕೃತ, ಕಾವ್ಯ, ಇತಿಹಾಸ, ಭಾರತದಾದ್ಯಂತ ಇರುವ ಪವಿತ್ರ ಪರಿಸರ ವಿಜ್ಞಾನದ ಸಂಪ್ರದಾಯಗಳು, ಭಾರತೀಯ ಪರಿಕಲ್ಪನೆಗಳು ಮತ್ತು ಆಡಳಿತದ ಅಭ್ಯಾಸಗಳು, ರಾಜಕೀಯ ಸಿದ್ಧಾಂತ, ನೈತಿಕ ಸೂಚನೆ ಮತ್ತು ನೀತಿಶಾಸ್ತ್ರ, ತೀರ್ಥಯಾತ್ರೆಯ ಸಂಪ್ರದಾಯಗಳು, ಭಾರತದ ಪವಿತ್ರ ಭೌಗೋಳಿಕತೆ, ಮಂಡಲ ಭೂದೃಶ್ಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಸಂಪ್ರದಾಯಗಳು ಇತ್ಯಾದಿಗಳ ಬಗ್ಗೆ ಜ್ಞಾನವನ್ನು ನೀಡಲಿದೆ.
ಕೋರ್ಸ್ನ ಮೊದಲ ಉಪನ್ಯಾಸವನ್ನು ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯ ಮತ್ತು ಐಐಟಿ ಗಾಂಧಿನಗರದ ಪ್ರೊಫೆಸರ್ ಶ್ರೀನಿವಾಸ್ ರೆಡ್ಡಿ ನೀಡಲಿದ್ದಾರೆ. ಇವರು ಸಂಸ್ಕೃತ, ಶಾಸ್ತ್ರೀಯ ತೆಲುಗು, ತಮಿಳು ಮತ್ತು ಭಾರತೀಯ ಸಂಗೀತದ ಪ್ರಖ್ಯಾತ ವಿದ್ವಾಂಸರಾಗಿದ್ದಾರೆ.ಇವರು ‘ಪ್ಯಾನ್-ಇಂಡಿಕ್ ಪರಿಕಲ್ಪನೆಗಳು ಮತ್ತು ಆಡಳಿತದ ಅಭ್ಯಾಸಗಳು, ರಾಜಕೀಯ ಸಿದ್ಧಾಂತ, ನೈತಿಕ ಸೂಚನೆ ಮತ್ತು ನೀತಿಶಾಸ್ತ್ರ’ ಕುರಿತು ಮಾತನಾಡಲಿದ್ದಾರೆ.
ಅಹಮದಾಬಾದ್-ಗಾಂಧಿನಗರದ ಇತರ ಸಂಸ್ಥೆಗಳ ವಿದ್ಯಾರ್ಥಿಗಳಿಗೂ ಈ ಕೋರ್ಸ್ ಮುಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.