ನವದೆಹಲಿ: ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ವಿಶೇಷ ರಕ್ಷಣಾ ತಂಡ) (ತಿದ್ದುಪಡಿ) ಮಸೂದೆ 2019 ಇಂದು ರಾಜ್ಯಸಭೆಯಲ್ಲಿ ಮಂಡನೆಗೊಂಡಿದೆ. ಈ ಮಸೂದೆ ನವೆಂಬರ್ 27ರಂದು ಲೋಕಸಭೆಯಲ್ಲಿ ಮಂಡನೆ ಗೊಂಡಿತ್ತು. ಧ್ವನಿಮತದ ಮೂಲಕ ಈ ಮಸೂದೆಗೆ ಅಂಗೀಕಾರವನ್ನು ನೀಡಲಾಗಿದೆ, ಆದರೆ ಈ ವೇಳೆ ಕಾಂಗ್ರೆಸ್ ಸದಸ್ಯರುಗಳು ಪ್ರತಿಭಟನೆ ನಡೆಸಿ ಸದನದಿಂದ ಹೊರ ನಡೆದಿದ್ದಾರೆ.
ಡಿಸೆಂಬರ್ 13ರಂದು ಚಳಿಗಾಲದ ಅಧಿವೇಶನ ಅಂತ್ಯವಾಗಲಿದೆ, ಈ ಹಿನ್ನೆಲೆಯಲ್ಲಿ ಅಂದುಕೊಂಡ ಕಾರ್ಯವನ್ನು ಆದಷ್ಟು ಬೇಗ ಆಗಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ಇಂದು ಬಿಜೆಪಿ ಸಭೆ ನಡೆಸಿದೆ.
ಮುಂದಿನ ವಾರ ಸದನದಲ್ಲಿ ನಾಗರಿಕತ್ವ (ತಿದ್ದುಪಡಿ) ಮಸೂದೆಯನ್ನು ಮಂಡನೆ ಗೊಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಹಡಗುಗಳ ಮರುಬಳಕೆ ಮಸೂದೆ 2019 ಅನ್ನು ಕೂಡ ಕೇಂದ್ರ ಸಚಿವ ಮನ್ಸುಕ್ ಮಾಂಡವೀಯ ಅವರು ಲೋಕಸಭೆಯ ಮುಂದೆ ಮಂಡನೆ ಗೊಳಿಸಲು ಸಜ್ಜಾಗಿದ್ದಾರೆ. ಇದು ಕೆಲವೊಂದು ಗುಣಮಟ್ಟವನ್ನು ನಿಗದಿಪಡಿಸಿ ಹಡಗುಗಳ ಮರುಬಳಕೆಗೆ ಅನುಮತಿಯನ್ನು ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.