ನವದೆಹಲಿ: 2011ರಲ್ಲಿ ಒಸಾಮ ಬಿನ್ ಲಾದೆನ್ ಅನ್ನು ಹತ್ಯೆ ಮಾಡಲಾಗಿದ್ದರೂ, ಇಂದಿಗೂ ಜಗತ್ತಿನಲ್ಲಿ ಹಲವರು ಅಲ್ ಖೈದಾ ಸಂಬಂಧಿತ ಭಯೋತ್ಪಾದಕ ಗುಂಪುಗಳು ಅಸ್ತಿತ್ವದಲ್ಲಿದೆ. ಅದೇ ರೀತಿ, ಅಬು ಬಕರ್ ಅಲ್-ಬಗ್ದಾದಿಯನ್ನು ಹತ್ಯೆ ಮಾಡಿರುವುದು ಕೂಡ ಇಸಿಸ್ ಉಗ್ರ ಸಂಘಟನೆಯ ಅಂತ್ಯವಾಗುವುದಿಲ್ಲ ಎಂದು ಭಾರತ ‘ನೋ ಮನಿ ಫಾರ್ ಟೆರರ್’ ಕಾನ್ಫರೆನ್ಸ್ನಲ್ಲಿ ಹೇಳಿದೆ.
ಎರಡು ದಿನಗಳ ‘ನೋ ಮನಿ ಫಾರ್ ಟೆರರ್’ ಕಾನ್ಫರೆನ್ಸ್ ಪ್ರಸ್ತುತ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ನಡೆಯುತ್ತಿದೆ. ನವೆಂಬರ್ 8ರಂದು ಸಮಾಪಣಗೊಳ್ಳಲಿದೆ. ಇದರಲ್ಲಿ 65 ರಾಷ್ಟ್ರಗಳು ಭಾಗಿಯಾಗಿವೆ. ಮುಂದಿನ ವರ್ಷ 2020ಕ್ಕೆ ಭಾರತವು ‘ನೋ ಮನಿ ಫಾರ್ ಟೆರರ್’ ಕಾನ್ಫರೆನ್ಸ್ ಅನ್ನು ಆಯೋಜನೆಗೊಳಿಸುವುದಾಗಿ ಘೋಷಣೆ ಮಾಡಿದೆ.
ಈ ಕಾನ್ಫರೆನ್ಸ್ನಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಅವರು ಭಾಗವಹಿಸಿದ್ದು, “ಅಲ್ ಬಾಗ್ದಾದಿಯ ಹತ್ಯೆ ಇಸ್ಲಾಮಿಕ್ ಸ್ಟೇಟ್ಸ್ ಉಗ್ರರ ಅಂತ್ಯವಾಗುವುದಿಲ್ಲ” ಎಂದು ಪ್ರತಿಪಾದಿಸಿದ್ದಾರೆ.
ಭಾರತವು ಗಡಿಯಾಚೆಗಿನ ಭಯೋತ್ಪಾದನೆಯ ಸಂತ್ರಸ್ಥನಾಗಿದೆ ಎಂದಿರುವ ಅವರು, ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತಾ ನೀತಿಯನ್ನು ನಾವು ಅನುಸರಿಸಿದ್ದೇವೆ ಎಂದು ಅವರು ಪುನರುಚ್ಛರಿಸಿದ್ದಾರೆ.
ಅಲ್ಲದೇ, ಉಗ್ರರಿಗರ ಹಣಕಾಸು ಒದಗಿಸಲು ಸಹಾಯ ಮಾಡುವವರ ವಿರುದ್ಧ ಜಗತ್ತು ಒಂದಾಗಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ ಮತ್ತು ಭಯೋತ್ಪಾದನೆಯ ಬಗ್ಗೆ ಕೆಲವು ರಾಷ್ಟ್ರಗಳು ಮೌನವಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆಯ ಮಹಾನಿರ್ದೇಶಕ ವೈಸಿ ಮೋದಿ ಸೇರಿದಂತೆ ಉನ್ನತ ಐದು ಸದಸ್ಯರ ನಿಯೋಗವನ್ನು ರೆಡ್ಡಿ ಇಲ್ಲಿ ಮುನ್ನಡೆಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.