ನವದೆಹಲಿ: ಮೋದಿ ಸರ್ಕಾರಕ್ಕೆ ಪ್ರಮುಖ ಯಶಸ್ಸು ಪ್ರಾಪ್ತವಾಗಿದೆ. ಗುರುವಾರ ಬಿಡುಗಡೆಯಾದ ಅಧ್ಯಯನದ ಪ್ರಕಾರ, ರಸಗೊಬ್ಬರ ಸಬ್ಸಿಡಿಗಳಿಗಾಗಿನ ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಯು ಅನುಷ್ಠಾನಗೊಂಡ ಮೊದಲ ವರ್ಷದಲ್ಲೇ ಕೇಂದ್ರ ಸರ್ಕಾರಕ್ಕೆ 10,800 ಕೋಟಿ ರೂಪಾಯಿ ($1.54 ಬಿಲಿಯನ್)ಗಳನ್ನು ಉಳಿಸಿದೆ.
ನೇರ ಲಾಭ ವರ್ಗಾವಣೆ ಮೂಲಕ ರಸಗೊಬ್ಬರ ಸಬ್ಸಿಡಿ ವರ್ಗಾವಣೆಯನ್ನು ಸರ್ಕಾರವು 2017 ರ ಅಕ್ಟೋಬರ್ನಲ್ಲಿ ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ, ವ್ಯಾಪಾರಿಗಳು ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಿದ ನಂತರ ಮತ್ತು ಆಧಾರ್ ದೃಢೀಕರಿಸಿದ ವಹಿವಾಟನ್ನು ದಾಖಲಿಸಿದ ನಂತರ ಕೇಂದ್ರ ಸರ್ಕಾರವು ನೇರವಾಗಿ ಕಂಪನಿಗಳಿಗೆ ಸಬ್ಸಿಡಿ ಮೊತ್ತವನ್ನು ರವಾನಿಸುತ್ತದೆ.
ಮೈಕ್ರೋ ಸೇವ್ ಕನ್ಸಲ್ಟಿಂಗ್ (ಎಂಎಸ್ಸಿ) ಯ ಮೌಲ್ಯಮಾಪನದ ಪ್ರಕಾರ ಸರ್ಕಾರ ಕೈಗೊಂಡ ಈ ಯೋಜನೆಯು ರಸಗೊಬ್ಬರಗಳ ಚಲನೆ, ಅವಶ್ಯಕತೆ, ಸಂಗ್ರಹ ಮತ್ತು ವಿತರಣೆಯ ನೈಜ-ಸಮಯದ ಟ್ರ್ಯಾಕಿಂಗ್ ಅನ್ನು ಶಕ್ತಗೊಳಿಸಿದೆ. ಈ ಯೋಜನೆಯು ಕಾಗದಪತ್ರಗಳನ್ನು ಕಡಿಮೆ ಮಾಡುವ ಮೂಲಕ ಪ್ರಕ್ರಿಯೆಯನ್ನು ಸರಳಗೊಳಿಸಿದೆ.
ಈ ಹಿಂದೆ ಕೇಂದ್ರ ಸರ್ಕಾರವು ಸಬ್ಸಿಡಿ ವಿತರಣೆಯ ವ್ಯವಸ್ಥೆಯಡಿ, ಖರೀದಿ ಮತ್ತು ವಿತರಣೆಯ ದಾಖಲೆ ಇಲ್ಲದೆಯೇ ಗೊಬ್ಬರಗಳ ಉತ್ಪಾದನೆ ಮತ್ತು ರವಾನೆಯ ನಂತರ ಸಬ್ಸಿಡಿಯನ್ನು ಪಾವತಿಸುತ್ತಿತ್ತು, ಇದೀಗ ಈ ವ್ಯವಸ್ಥೆಯಲ್ಲಿ ಮಹತ್ವದ ಮಾರ್ಪಾಡಾಗಿದೆ. ಇದು ಒಂದು ಪ್ರಮುಖ ಸುಧಾರಣೆಯಾಗಿದೆ.
ಕೇಂದ್ರ ಸರ್ಕಾರವು ವಾರ್ಷಿಕ 70,000 ಕೋಟಿ ರೂಪಾಯಿ ರಸಗೊಬ್ಬರ ಸಬ್ಸಿಡಿ ಬಿಲ್ ಅನ್ನು ಪಾವತಿ ಮಾಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.