ಚಂಡೀಗಢ: ಮಹಾಭಾರತ ಥೀಮ್ನ ಬೃಹತ್ ಮ್ಯೂಸಿಯಂ ರಚನೆಗೆ ಹರಿಯಾಣ ಮುಂದಾಗಿದ್ದು, ಈಗಾಗಲೇ ನಿರ್ಮಾಣ ಕಾಮಗಾರಿಗಳು ಆರಂಭಗೊಂಡಿವೆ.
ಕುರುಕ್ಷೇತ್ರ ಜಿಲ್ಲೆಯ ಜ್ಯೋತಿಸರ್ ಗ್ರಾಮದಲ್ಲಿ ಬಹುಕೋಟಿ ವೆಚ್ಚದ ಮಹಾಭಾರತ್ ಥೀಮ್ನ ಬೃಹತ್ ಮ್ಯೂಸಿಯಂನ ನಿರ್ಮಾಣವಾಗುತ್ತಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ‘ಸ್ವದೇಶ್ ದರ್ಶನ್ ಯೋಜನೆ’ಯಡಿ ರೂ.31 ಕೋಟಿಗಳನ್ನು ನೀಡಿದೆ.
ಈ ಮ್ಯೂಸಿಯಂನೊಳಗೆ ಧ್ಯಾನ ಕೇಂದ್ರ, ವಸ್ತುಪ್ರದರ್ಶನ, ಶಾಪಿಂಗ್ ಕಾಂಪ್ಲೆಕ್ಸ್, ಪಾರ್ಕಿಂಗ್ ಲ್ಯಾಂಡ್ಗಳು ಇರಲಿವೆ. ಮಹಾಭಾರತದ ಬೃಹತ್ ಸ್ವರೂಪವನ್ನು ಈ ಮ್ಯೂಸಿಯಂ ಅನಾವರಣಗೊಳಿಸಲಿದೆ ಎನ್ನಲಾಗಿದೆ.
ಈಗಾಗಲೇ ಮ್ಯೂಸಿಯಂ ಸುತ್ತಲೂ ಬೌಂಡರಿ ಹಾಲ್ ನಿರ್ಮಾಣದ ಕಾರ್ಯ ಆರಂಭವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.