ನವದೆಹಲಿ: ಪಠಾನ್ಕೋಟ್ನ ಭಾರತೀಯ ವಾಯುನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದು, ಈ ಸಂಬಂಧ ಗುರುದಾಸ್ಪುರ ಎಸ್ಪಿ ಸಲ್ವಿಂದರ್ ಸಿಂಗ್ ಸೋಮವಾರ ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರೀಯ ತನಿಖಾ ದಳ (ಎನ್ಐಎ) ಪಠಾನ್ಕೋಟ್ ದಾಳಿಯ ತನಿಖೆಯನ್ನು ವಹಿಸಿಕೊಂಡಿದ್ದು, ಪಾಲಿಗ್ರಾಫ್ ಪರೀಕ್ಷೆ ನಡೆಸಲು ಸಿಂಗ್ ಅವರನ್ನು ದೆಹಲಿಗೆ ಕರೆ ತಂದಿದೆ. ಪಠಾನ್ಕೋಟ್ ದಾಳಿಯ ಉಗ್ರರು ಸಲ್ವಿಂದರ್ ಸಿಂಗ್ ಅವರನ್ನು ಅಪಹರಿಸಿದ್ದರು. ಜ.8ರಂದು ಎನ್ಐಎ ಸಲ್ವಿಂದರ್ ಸಿಂಗ್ಗೆ ಸಮನ್ಸ್ ಜಾರಿಗೊಳಿಸಿದ್ದು, ವಿಚಾರಣೆಗೆ ಒಳಪಡುವಂತೆ ಆದೇಶಸಿತ್ತು.
ಪಠಾನ್ಕೋಟ್ ವಾಯುನೆಲೆ ಪ್ರದೇಶ ಹಾಗೂ ಅದರ ಸಮೀಪವಿರುವ ಗಡಿ ಗ್ರಾಮದ ಸುತ್ತ ಕೆಲವು ಹೆಜ್ಜೆ ಗುರುತುಗಳು ಪತ್ತೆಯಾಗದ್ದು, ತನಿಖಾ ಸಂಸ್ಥೆಯು ಇದರ ಪರೀಕ್ಷೆ ನಡೆಸಲು ಕೇಂದ್ರ ವಿಜ್ಞನ ಪ್ರಯೋಗಾಲಕ್ಕೆ ಕಳುಹಿಸಿದೆ.
ತನಿಖಾ ದಳದ ತಂಡಗಳು ಪಠಾನ್ಕೋಟ್ ಹಾಗೂ ಸಮೀಪದ ಗುರುದಾಸ್ಪುರ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಲು ತನಿಖೆ ನಡೆಸುತ್ತಿದ್ದಿದೆ. ಸಲ್ವಿಂದರ್ ಸಿಂಗ್ ಪ್ರಸ್ತುತ ಪಂಜಾಬ್ನ ಸಶಸ್ತ್ರ ಪೊಲೀಸ್ ಪಡೆಯ 75ನೇ ಬೆಟಾಲಿಯನ್ನ ಸಹಾಯಕ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರೆ.
ಸಲ್ವಿಂದರ್ ಸಿಂಗ್, ಆತನ ಸ್ನೇಹಿತ ರಾಜೇಶ್ ವರ್ಮಾ ಹಾಗೂ ಆತನ ಅಡುಗೆಯವನಾದ ಮದನ್ ಗೋಪಾಲ್ನನ್ನು ಭಯೋತ್ಪಾದಕರು ಡಿ.31ರ ಮಧ್ಯರಾತ್ರಿ ಅಪಹರಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.