News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಯಲಲಿತಾ ಸಾವು: ವಿಕೆ ಶಶಿಕಲಾ ವಿರುದ್ಧ ತನಿಖೆಗೆ ಸಮಿತಿ ಶಿಫಾರಸು

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದಂತೆ ಅವರ ಆಪ್ತೆ ವಿಕೆ ಶಶಿಕಲಾ ವಿರುದ್ಧ ತನಿಖೆ ನಡೆಸುವಂತೆ ನ್ಯಾ ಎ.ಆರ್ಮುಗಸ್ವಾಮಿ ಸಮಿತಿ ಶಿಫಾರಸು ಮಾಡಿದೆ.

ವಿಕೆ ಶಿಶಿಕಲಾ ಮಾತ್ರವಲ್ಲದೇ, ಶಿವಕುಮಾರ್ (ಜಯಲಲಿತಾ ಅವರ ವೈದ್ಯ ಮತ್ತು ಶಶಿಕಲಾ ಅವರ ಸಂಬಂಧಿ), ಮಾಜಿ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ಮತ್ತು ಮಾಜಿ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ವಿರುದ್ಧ ತನಿಖೆ ನಡೆಸುವಂತೆಯೂ ಸಮಿತಿಯು ಶಿಫಾರಸು ಮಾಡಿದೆ.

ಜಯಲಲಿತಾ ಅವರ ಸಾವಿನ ಬಗ್ಗೆ ತನಿಖೆ ನಡೆಸುವ ಸಲುವಾಗಿ ಈ ಸಮಿತಿಯು 500 ಪುಟಗಳ  ವರದಿಯನ್ನು ಸಿದ್ಧಪಡಿಸಿದೆ. ಜಯಲಲಿತಾ ಅವರ ಪಕ್ಷ ಎಐಎಡಿಎಂಕೆ 2017 ರಲ್ಲಿ ತಮಿಳುನಾಡಿನಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಎ ಆರ್ಮುಗಸ್ವಾಮಿ ನೇತೃತ್ವದ ಆಯೋಗವನ್ನು ರಚಿಸಲಾಯಿತು.

ಕಾನೂನು ಹಕ್ಕುಗಳು, ಜಯಲಲಿತಾ ಅವರ ಅನಾರೋಗ್ಯ ಮತ್ತು ಅಪೋಲೋ ಆಸ್ಪತ್ರೆಯಲ್ಲಿನ ಚಿಕಿತ್ಸೆಯ ವೇಳೆ ನಡೆದ ಘಟನೆ ಮತ್ತು ಪಿತೂರಿಗಳನ್ನು ಬೇಧಿಸಲು ಈ ಆಯೋಗವನ್ನು ರಚಿಸಿರುವುದರ ಹಿಂದಿನ ಉದ್ದೇಶವಾಗಿದೆ.

ಆಯೋಗವು ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ವರದಿಯನ್ನು ಸಲ್ಲಿಸಿತು ಮತ್ತು ಅದನ್ನು ಇಂದು ರಾಜ್ಯ ವಿಧಾನಸಭೆಯ ಮುಂದೆ ಮಂಡಿಸಲಾಗಿದೆ.

ಜಯಲಲಿತಾ ಅವರ ಚಿಕಿತ್ಸೆಯನ್ನು ಗೌಪ್ಯವಾಗಿಟ್ಟಿದ್ದ ಶಶಿಕಲಾ ಅವರು ವೈದ್ಯರ ಸಲಹೆಯ ಬಳಿಕವೂ ಆಂಜಿಯೋಪ್ಲಾಸ್ಟಿ ಮಾಡುವುದನ್ನು ತಡೆದಿದ್ದರು ಎಂದು ಸಮಿತಿಯು ಕಂಡುಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಗಳು ತಿಳಿಸಿವೆ.

ಶಶಿಕಲಾ ಅವರ ಸೊಸೆ ಕೃಷ್ಣಪ್ರಿಯಾ ಅವರು ತಮ್ಮ ಚಿಕ್ಕಮ್ಮ ಮತ್ತು ಜಯಲಲಿತಾ ನಡುವಿನ ಸಂಬಂಧವು 2012 ರಿಂದ ಹದಗೆಟ್ಟಿದೆ ಎಂದು ಹೇಳಿದ್ದರು. ಹೀಗಾಗಿ ಅವರ ಸಾವಿನಲ್ಲಿ ಶಶಿಕಲಾ ಭಾಗಿಯಾಗಿರುವ ಬಗ್ಗೆ ಗುಮಾನಿಗಳು ಹೆಚ್ಚಾಗಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top