ಹೈದರಾಬಾದ್: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಟಿ.ಹನುಮಾನ್ ಚೌಧರಿ ಮತ್ತು ನಿವೃತ್ತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಆಂಧ್ರ ಪ್ರದೇಶದ ಹಿಂದೂ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕೆಂದು ಕೋರಿ ಜಗನ್ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಕ್ರೌಡ್ಕ್ಯಾಶ್ನಲ್ಲಿ ಆಯೋಜಿಸಲಾಗಿದ್ದ ಅರ್ಜಿ ಅಭಿಯಾನದಲ್ಲಿ, ಡಾ. ಚೌಧರಿ ಅವರು ಐಎಎಸ್ ಮಾಜಿ ಅಧಿಕಾರಿಗಳಾದ ಐವೈಆರ್ ಕೃಷ್ಣ ರಾವ್, ಕೆ ಪದ್ಮನಾಭಯ ಮತ್ತು ಮಾಜಿ ಐಪಿಎಸ್ ಅಧಿಕಾರಿಗಳಾದ ಎಂ.ನಾಗೇಶ್ವರ ರಾವ್ ಮತ್ತು ಕೆ ಅರವಿಂದ ರಾವ್ ಅವರಂತಹ ಶ್ರೇಷ್ಠ ವ್ಯಕ್ತಿಗಳೊಂದಿಗೆ ಜೊತೆಗೂಡಿ ಅಭಿಯಾನದ ನೇತೃತ್ವ ವಹಿಸಿದ್ದಾರೆ.
ಆಂಧ್ರಪ್ರದೇಶ ಸರ್ಕಾರವು ಇಂದು 23,846 ಹಿಂದೂ ದೇವಾಲಯಗಳನ್ನು ಮತ್ತು ಅದರ ಸಾವಿರಾರು ಕೋಟಿ ಮೌಲ್ಯದ ಆಸ್ತಿಗಳನ್ನು ನಿಯಂತ್ರಿಸುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಮಸೀದಿಗಳು ಮತ್ತು ಚರ್ಚುಗಳ ನಿರ್ವಹಣೆಗೆ ಒದಗಿಸಿರುವ ಸ್ವಾತಂತ್ರ್ಯದಂತೆ ಹಿಂದೂಗಳು ತಮ್ಮ ದೇವಾಲಯಗಳನ್ನು ನಿರ್ವಹಿಸಲು ಸ್ವಾತಂತ್ರ್ಯವನ್ನು ಹೊಂದಿರಬೇಕು ಎಂದು ಡಾ.ಚೌಧರಿ ಹೇಳಿದ್ದಾರೆ.
“ಹಿಂದೂ ದೇವಾಲಯಗಳ ನಿರ್ವಹಣೆ ಮತ್ತು ಅದರ ಆಡಳಿತದಿಂದ ನಿಮ್ಮನ್ನು ದೂರವಿಡಿ, ನೀವು ದೇವಾಲಯಗಳನ್ನು ಹಸ್ತಾಂತರಿಸಲು ಬಯಸುವ ದಿನಾಂಕವನ್ನು ಘೋಷಿಸಿ ಮತ್ತು ದೇವಾಲಯಗಳನ್ನು ಯಾರಿಗೆ ಹಸ್ತಾಂತರಿಸಬೇಕೆಂದು ಹಿಂದೂಗಳಿಂದ ಸಲಹೆಗಳನ್ನು ಆಹ್ವಾನಿಸಿ” ಎಂದು ಡಾ.ಚೌಧರಿ ಸರ್ಕಾರಕ್ಕೆ ಹೇಳಿದ್ದಾರೆ.
ಈವರೆಗೆ ಅಭಿಯಾನದಡಿ 7,000 ಸಹಿಯನ್ನು ಸಂಗ್ರಹಿಸಲಾಗಿದೆ, ಆಂಧ್ರಪ್ರದೇಶ ದತ್ತಿ ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯ್ದೆ, 1987 ಅನ್ನು ರದ್ದು ಮಾಡಬೇಕು ಮತ್ತು ಅದರ ಸ್ಥಳದಲ್ಲಿ ಹೊಸ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.