ನವದೆಹಲಿ: ಸೇವೆ ಭಾರತದ ಪರಂಪರೆ. ಸ್ವಂತ ಸುಖವನ್ನು ಬಯಸದೆ, ಸಮಾಜದ ಹಿತದೃಷ್ಟಿಯಿಂದಲೇ ಜೀವನದ ಸಾರ್ಥಕತೆಯನ್ನು ಪಡೆಯುವುದು, ನಿಸ್ವಾರ್ಥ ಮನೋಭಾವವನ್ನು ಹೊಂದುವುದು, ಅನಾಮಧೇಯರಾಗಿ ಉಳಿಯುವುದು ಮತ್ತು ಜೀವಿತಾವಧಿಯವರೆಗೂ ಕೆಲಸ ಮಾಡುವುದು ಯಾವಾಗಲೂ ಭಾರತೀಯ ಸೇವಾ ಸಾಧಕನ ವಿಶೇಷತೆಯಾಗಿರುತ್ತದೆ.
ವಿವಿಧ ಸಾಮಾಜ ಸೇವಾ ಸಂಸ್ಥೆಗಳು ನಮ್ಮ ಸಮಾಜದಲ್ಲಿ ನಿರಂತರವಾಗಿ ಸಮಾಜ ಸೇವೆಗಳನ್ನು ನಡೆಸುತ್ತಿರುತ್ತವೆ. ವರ್ಷದಿಂದ ವರ್ಷಕ್ಕೆ ಸಮಾಜ ಸೇವಾ ಕಾರ್ಯಗಳು ಹೆಚ್ಚುತ್ತಲೇ ಹೋಗುತ್ತಿವೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಗಳು ಸಾರ್ವಜನಿಕರ ಮುಂದೆ ಬರಲಿವೆ.
ಹೀಗೆ ಸಮಾಜ ಸೇವೆಯಲ್ಲಿ ನಿರತರಾಗಿರುವ ಸಂಸ್ಥೆಗಳ, ವ್ಯಕ್ತಿಗಳ ಯಶೋಗಾಥೆಯನ್ನು ಒಳಗೊಂಡ ‘ಸಮರ್ಪಣಾ’ ಎಂಬ ಹೆಸರಿನ ಹಿಂದಿ ಧಾರಾವಾಹಿ ದೂರದರ್ಶನದ ರಾಷ್ಟ್ರೀಯ ವಾಹಿನಿಯಲ್ಲಿ 2019ರ ನವೆಂಬರ್ 17 ರಿಂದ (ಭಾನುವಾರ) ಪ್ರಸಾರವಾಗಲಿದೆ.
ಈ ಧಾರಾವಾಹಿಯು 52 ಭಾಗಗಳನ್ನು ಹೊಂದಿದ್ದು, ದೂರದರ್ಶನದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ ಹತ್ತು ಗಂಟೆಗೆ ಪ್ರಸಾರವಾಗಲಿದೆ.
ಈ ಧಾರಾವಾಹಿಯನ್ನು ಪ್ರಸಿದ್ಧ ಮರಾಠಿ ನಾಟಕ ಬರಹಗಾರ ಅಭಿರಾಮ್ ದಾಮೋದರ್ ಭಡ್ಕಮ್ಕರ್ ಜಿ ಬರೆದಿದ್ದಾರೆ. ಈ ಧಾರಾವಾಹಿಗೆ ವ್ಯಾಪಕ ಪ್ರಚಾರ ನೀಡುವ ಮೂಲಕ ಸಮಾಜದಲ್ಲಿ ಸಕಾರಾತ್ಮಕತೆಯ ಮನೋಭಾವವನ್ನು ಹೆಚ್ಚಿಸುವುದು ಎಲ್ಲರ ಕರ್ತವ್ಯವಾಗಿದೆ.
समर्पण
यह स्वप्न नहीं,हकीकत है,जुनून है,यह कथा है सच्चे रूप से समाज में बदलाव लाने वाले उन लोगों की,जिनका है पूर्ण रूप से समर्पण…DD 1/ DD National channel पर 17th Nov,2019 से प्रत्येक रविवार प्रातः 10.00 am बजे@sewabhartidelh @SewaGatha @sewa_bharti @sewausa @HaryanaSewa pic.twitter.com/7DnFQRFqZm
— VSK BHARAT (@editorvskbharat) November 14, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.