ನವದೆಹಲಿ: ಭಾರತೀಯ ವಿಜ್ಞಾನಿಗಳು ಯಶಸ್ವಿಯಾಗಿ ಎ-ಸ್ಯಾಟ್(Anti-Satellite) ಮಿಸೈಲ್ ಮೂಲಕ ಬಾಹ್ಯಾಕಾಶದಲ್ಲಿ ಕಾರ್ಯಸ್ಥಗಿತಗೊಳಿಸಿದ್ದ ಭಾರತದ ಸೆಟ್ಲೈಟ್ವೊಂದನ್ನು ಹೊಡೆದುರುಳಿಸಿ, ಭಾರತವೂ ಬಾಹ್ಯಾಕಾಶದಲ್ಲಿ ಸೂಪರ್ ಪವರ್ ದೇಶವಾಗಿದೆ ಎಂದು ತೋರಿಸಿಕೊಟ್ಟಿದ್ದಾರೆ. ಇದರಿಂದಾಗಿ ಭಾರತ ವಿಶ್ವದ ಪ್ರಮುಖ ಬಾಹ್ಯಾಕಾಶ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಘೋಷಣೆ ಮಾಡಿದ್ದಾರೆ.
‘ಮಿಶನ್ ಶಕ್ತಿ’ ಮೂಲಕ ‘ಎ-ಸ್ಯಾಟ್’ ಆ್ಯಂಟಿ ಸೆಟ್ಲೈಟ್ ಮಿಸೈಲ್ನಿಂದ ಕಠಿಣವಾದ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ಆರಂಭಿಸಿದ 3 ನಿಮಿಷದಲ್ಲೇ ಅಂತರೀಕ್ಷದಲ್ಲಿ 300 ಕಿ.ಮೀ. ದೂರದಲ್ಲಿದ್ದ ಬೇಹುಗಾರಿಕಾ ಸೆಟ್ಲೈಟ್ ಅನ್ನು ಹೊಡೆದುರುಳಿಸಿರುವುದು ಗಮನಾರ್ಹವಾದ ಸಂಗತಿ ಎಂದಿದ್ದಾರೆ.
An important message to the nation. Watch. https://t.co/0LEOATgOOQ
— Chowkidar Narendra Modi (@narendramodi) March 27, 2019
ಬಾಹ್ಯಾಕಾಶ ಉಪಗ್ರಹ ಹೊಡೆದುರುಳಿಸುವ ತಂತ್ರಜ್ಞಾನ ಹೊಂದಿದ ನಾಲ್ಕನೆಯ ಶಕ್ತಿಶಾಲಿ ದೇಶವಾಗಿ ಭಾರತ ಈಗ ಹೊರಹೊಮ್ಮಿದೆ. ಅಮೆರಿಕಾ, ರಷ್ಯಾ ಮತ್ತು ಚೀನಾ ಈ ವ್ಯವಸ್ಥೆಯನ್ನು ಹೊಂದಿದೆ.
ಎ-ಸ್ಯಾಟ್ ಮಿಸೈಲ್ ಭಾರತದ ಭದ್ರತೆ ಮತ್ತು ಪ್ರಗತಿಯನ್ನು ಬಲಪಡಿಸಲಿದೆ. ಇದು ಯಾರ ವಿರುದ್ಧವೂ ಅಲ್ಲ. ಸ್ಪೇಸ್ ಹೊರವಲಯದಲ್ಲಿ ಶಸ್ತ್ರಾಸ್ತ್ರಗಳ ಬಳಕೆಯನ್ನು ನಾವು ವಿರೋಧಿಸುತ್ತೇವೆ, ಆ ಧೋರಣೆಯಲ್ಲಿ ಬದಲಾವಣೆ ಇಲ್ಲ. ಇಂದಿನ ಕಾರ್ಯ ಯಾವುದೇ ಅಂತಾರಾಷ್ಟ್ರೀಯ ಕಾನೂನು ಮತ್ತು ದ್ವಿಪಕ್ಷೀಯ ಒಪ್ಪಂದಗಳ ಉಲ್ಲಂಘನೆಯನ್ನು ಮಾಡಿಲ್ಲ ಎಂದಿದ್ದಾರೆ. ಸಂಪೂರ್ಣ ದೇಶೀಯವಾಗಿ ಈ ಸಾಮರ್ಥ್ಯವನ್ನು ಭಾರತ ಅಭಿವೃದ್ಧಿ ಪಡಿಸಿದ್ದು ಮತ್ತೊಂದು ಗಮನಾರ್ಹ ವಿಷಯ.
ಈ ಮಹತ್ವದ ಸಾಧನೆ ಮಾಡಿದ ಡಿಆರ್ಡಿಓ ವಿಜ್ಞಾನಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.