ನವದೆಹಲಿ: ಫಿಜಿಯಲ್ಲಿ ಆಯೋಜನೆಗೊಂಡದ್ದ 12ನೇ ವಿಶ್ವ ಹಿಂದಿ ಸಮ್ಮೇಳನವು ಇಂದು ಬೆಳಗ್ಗೆ ಮುಕ್ತಾಯವಾಯಿತು. ಮೂರು ದಿನಗಳ ಸಮ್ಮೇಳನವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಫಿಜಿ ಸರ್ಕಾರದ ಸಹಯೋಗದೊಂದಿಗೆ ಆಯೋಜಿಸಿದೆ.
ಫಿಜಿಯ ಉಪಪ್ರಧಾನಿ ಬಿಮನ್ ಪ್ರಸಾದ್, ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಮತ್ತು ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
“ಹಿಂದಿ – ಕೃತಕ ಬುದ್ಧಿಮತ್ತೆಯ ಸಾಂಪ್ರದಾಯಿಕ ಜ್ಞಾನ” ಎಂಬ ವಿಷಯದೊಂದಿಗೆ ಹಿಂದಿ ಸಮ್ಮೇಳನವನ್ನು ಆಯೋಜನೆಗೊಳಿಸಲಾಗಿತ್ತು ಈ. ವಿಷಯಾಧಾರಿತ ಸಮಗ್ರ ಅಧಿವೇಶನದ ಜೊತೆಗೆ 10 ಇತರ ಅಧಿವೇಶನಗಳನ್ನು ಸಮ್ಮೇಳನದಲ್ಲಿ ನಡೆಸಲಾಯಿತು.
50 ದೇಶಗಳ ಪ್ರತಿನಿಧಿಗಳು ವಿಶ್ವ ಹಿಂದಿ ಸಮ್ಮೇಳನದಲ್ಲಿ ಭಾಗವಹಿಸಿರುವುದು ವಿಶೇಷ.
फ़िजी में आयोजित 12वें #विश्वहिन्दीसम्मेलन के समापन कार्यक्रम में भाग लेकर सम्मानित महसूस कर रहा हूँ।फ़िजी के उपप्रधानमंत्री बीमन प्रसाद जी के शामिल होने के लिए धन्यवाद।
३ दिवसीय इस सम्मेलन में फ़िजी और भारत के सशक्त सांस्कृतिक और ऐतिहासिक संबंधों की छवि स्पष्ट रूप से दिखाई दी। pic.twitter.com/8MfpWgnWSp
— Dr. S. Jaishankar (@DrSJaishankar) February 17, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.