ತಿರುವನಂತಪುರಂ: ಕಮ್ಯುನಿಸ್ಟ್ ಆಳ್ವಿಕೆಯ ಕೇರಳದಲ್ಲಿ ಹಿಂದೂ ದೇವಾಲಯವೊಂದಕ್ಕೆ ಕೇಸರಿ ಅಲಂಕಾರವನ್ನು ಬಳಸದಂತೆ ಪೊಲೀಸರು ನಿರ್ದೇಶನ ನೀಡಿರುವ ಬೆಳವಣಿಗೆ ನಡೆದಿದೆ. ಪೊಲೀಸರ ಈ ಸೂಚನೆಗೆ ಭಕ್ತಾದಿಗಳು ವಿಭಿನ್ನ ಧಾಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕೇರಳದ ತಿರುವನಂತಪುರಂನ ದಕ್ಷಿಣ ಹೊರವಲಯದಲ್ಲಿರುವ ವೆಲ್ಲಯಣಿ ಭದ್ರಕಾಳಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಕಲಿಯುಟ್ಟು ಮಹೋತ್ಸವಕ್ಕೆ ಕೇಸರಿ ಬಣ್ಣದ ಬಂಟಿಂಗ್ಸ್, ಧ್ವಜಗಳು ಮತ್ತು ಇತರ ಬಟ್ಟೆಗಳನ್ನು ಬಳಸದಂತೆ ದೇವಸ್ಥಾನದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಾನೂನು-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ನಿಷೇಧ ಹೇರಿರುವುದಾಗಿ ಪೊಲೀಸರು ಕಾರಣ ನೀಡಿದ್ದಾರೆ. ಆದರೆ ಸ್ಥಳೀಯ ಹಿಂದೂ ಭಕ್ತರು ‘ಕೇಸರಿ ನಿಷೇಧ’ವನ್ನು ವಿರೋಧಿಸಲು ವಿಶಿಷ್ಟವಾದ ಮಾರ್ಗಗಳನ್ನು ಅಳವಡಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ಹಲವಾರು ಹಿಂದೂ ಮಹಿಳೆಯರು ಸಾಂಪ್ರದಾಯಿಕ ಸೀರೆಗೆ ಕೇಸರಿ ಬ್ಲೌಸ್ ಮತ್ತು ಚೂಡಿದಾರುಗಳಿಗೆ ಕೇಸರಿ ದುಪಟ್ಟಾಗಳನ್ನು ಹಾಕಿಕೊಂಡು ದೇಗುಲಕ್ಕೆ ಬಂದಿದ್ದಾರೆ. ಅಲದೇ ಪೊಲೀಸರ ವಿಶ್ರಾಂತ ಸ್ಥಳಗಳಿಗೆ ಕೇಸರಿ ಬಣ್ಣ ಬಳಿಯಲಾಗಿದೆ. ಅಷ್ಟೇ ಅಲ್ಲದೇ ಪೊಲೀಸರ ಅರ್ಥವಿಲ್ಲದ ಸೂಚನೆಗೆ ಕಿಮ್ಮತ್ತು ನೀಡದೆ ಕೇಸರಿಯಿಂದಲೇ ದೇಗುಲ ಮತ್ತು ರಸ್ತೆಯನ್ನು ಅಲಂಕರಿಸಿದ್ದಾರೆ. ದೇವಾಲಯದ ಅಧಿಕಾರಿಗಳು ಯಾವುದೇ ಕಾರಣಕ್ಕೂ ಕೇಸರಿ ಧ್ವಜ ಮತ್ತು ಬಂಟಿಂಗ್ಸ್ಗಳನ್ನು ತೆಗೆಯುವುದಿಲ್ಲ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಹಿಂದೂ ವಿರೋಧಿಗಳಿಗೆ ಪೊಲೀಸರು ಸಹಾಯ ಮಾಡುತ್ತಿದ್ದಾರೆ ಎಂದು ಭಕ್ತರು ಆರೋಪಿಸಿದ್ದಾರೆ.
Police ordered No saffron coloured decorations for famous Vellayani Devi Temple festival in Thiruvananthapuram
& here you go
Resting place for Police officers! pic.twitter.com/sx1EtOMJmE
— HKupdate (@HKupdate) February 9, 2023
ಪೊಲೀಸರ ಈ ಧೋರಣೆಗೆ ವ್ಯಾಪಕವಾದ ಆಕ್ರೋಶಗಳು ವ್ಯಕ್ತವಾಗಿದೆ.
#Shocking and #Unbelievable.
Kerala Police has written to the administration of Vellayani Devi Temple that they will be initiating strict legal actions against those who decorated the temple surroundings with Saffron color during the festival!Where is Kerala heading to? pic.twitter.com/p0H1TVRUT8
— നചികേതസ് (@nach1keta) February 12, 2023
& that how mothers responded to saffron ban in Vellayani temple 🙏 pic.twitter.com/Xn8JgS9XQm
— HKupdate (@HKupdate) February 11, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.