News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ರಾಚೀನ ನಟರಾಜ ವಿಗ್ರಹ ಚಿತ್ತೋರಗಢ ಕೋಟೆಯಲ್ಲಿ ಅಧಿಕಾರಿಗಳಿಗೆ ಹಸ್ತಾಂತರ

ನವದೆಹಲಿ: ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು 9 ಅಥವಾ 10 ನೇ ಶತಮಾನದ ನಟರಾಜ ವಿಗ್ರಹವನ್ನು ಚಿತ್ತೋರಗಢ ಕೋಟೆಯಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗೆ ಹಸ್ತಾಂತರಿಸಿದ್ದಾರೆ.

9 ಅಥವಾ 10 ನೇ ಶತಮಾನದ ನಟರಾಜ ವಿಗ್ರಹವನ್ನು 1998 ರಲ್ಲಿ ಚಿತ್ತೋರ್‌ಗಢದ ಬಡೋಲಿಯಲ್ಲಿರುವ ಶಿವ ದೇವಾಲಯದಿಂದ ಕಳವು ಮಾಡಲಾಗಿತ್ತು. ಸುದೀರ್ಘ ಕಾನೂನು ಪ್ರಕ್ರಿಯೆಯ ನಂತರ ಲಂಡನ್‌ನ ಖಾಸಗಿ ವಸ್ತುಸಂಗ್ರಹಾಲಯದಿಂದ 2020 ರಲ್ಲಿ ವಿಗ್ರಹವನ್ನು ಭಾರತಕ್ಕೆ ತರಲಾಯಿತು.

ರಾಜಸ್ಥಾನದ ಚಿತ್ತೋರ್ ಗಢ್ ಕೋಟೆಯಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ನಟರಾಜ ವಿಗ್ರಹವನ್ನು  ಹಸ್ತಾಂತರಿಸಿ ಮಾತನಾಡಿದ ಅವರು, 2013ರ ವರೆಗೆ ಪುರಾತನ ಮಹತ್ವವುಳ್ಳ 13 ಮೂರ್ತಿಗಳನ್ನು ಮಾತ್ರ ಭಾರತಕ್ಕೆ ತರಲು ಸಾಧ್ಯವಿತ್ತು, ಆದರೆ 2014ರ ನಂತರ ನರೇಂದ್ರ ಮೋದಿ ಸರಕಾರ 229 ಮೂರ್ತಿಗಳನ್ನು ಭಾರತಕ್ಕೆ ತಂದಿದೆ ಎಂದರು.

ಅಲ್ಲದೇ ಚಿತ್ತೋರಗಢ ಕೋಟೆಯ ಮೇಲೆ ರೋಪ್‌ವೇ ನಿರ್ಮಿಸಲು ಮತ್ತು ಭಾರತಮಾಲಾ ಯೋಜನೆಯೊಂದಿಗೆ ಚಿತ್ತೋರಗಢವನ್ನು ಸಂಪರ್ಕಿಸಲು ಯೋಜನೆ ರೂಪಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top