News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂದು ಪಿಂಗಳಿ ವೆಂಕಯ್ಯ ಅವರ 146 ನೇ ಜನ್ಮದಿನ: ತಿರಂಗಾ ಉತ್ಸವ ಆಯೋಜನೆ

ನವದೆಹಲಿ: ರಾಷ್ಟ್ರಧ್ವಜ ವಿನ್ಯಾಸಕಾರ ಪಿಂಗಳಿ ವೆಂಕಯ್ಯ ಅವರ 146 ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅವರು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ಆಚರಿಸಲು ಕೇಮದ್ರ ಸಂಸ್ಕೃತಿ ಸಚಿವಾಲಯವು “ತಿರಂಗಾ ಉತ್ಸವ”ವನ್ನು ಆಯೋಜಿಸುತ್ತಿದೆ.

ನವದೆಹಲಿಯಲ್ಲಿ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳ ಮೂಲಕ ತಿರಂಗಾ ಉತ್ಸವ ಜರುಗಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿರಂಗಾ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.

ಈ ಸಮಾರಂಭದಲ್ಲಿ ಪಿಂಗಲಿ ವೆಂಕಯ್ಯ ಅವರು ದೇಶಕ್ಕೆ ನೀಡಿದ ಅಮೂಲ್ಯ ಕೊಡುಗೆಗಳ ಗೌರವಾರ್ಥ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ನಂತರ ಅವರ ಕುಟುಂಬವನ್ನು ಸನ್ಮಾನಿಸಲಾಗುತ್ತಿದೆ.

ತಿರಂಗಾ ಉತ್ಸವವು “ಹರ್ ಘರ್ ತಿರಂಗಾ” ಗೀತೆ ಮತ್ತು ವೀಡಿಯೊದ ಭವ್ಯವಾದ ಬಿಡುಗಡೆಗೆ ಸಾಕ್ಷಿಯಾಗಲಿದೆ. ಸಂಗೀತ ಸಂಜೆಯು ಕೈಲಾಶ್ ಖೇರ್ ಮತ್ತು ಕೈಲಾಸ, ಹರ್ಷದೀಪ್ ಕೌರ್ ಮತ್ತು ಡಾ. ರಾಗಿಣಿ ಮಕ್ಖರ್ ಅವರಂತಹ ಮೇಸ್ಟ್ರೋಗಳ ನೇರ ಪ್ರದರ್ಶನಗಳನ್ನು ಕಾಣಲಿದೆ.

ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತದ ರಾಷ್ಟ್ರಧ್ವಜದ ವಿನ್ಯಾಸಕ ಪಿಂಗಳಿ ವೆಂಕಯ್ಯ ಅವರು ಗಾಂಧಿ ತತ್ವಗಳ ಅನುಯಾಯಿಗಳಾಗಿದ್ದು, ಮಹಾತ್ಮ ಗಾಂಧಿಯವರ ಕೋರಿಕೆಯ ಮೇರೆಗೆ ಅವರು ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ಮಧ್ಯದಲ್ಲಿ ಅಶೋಕ ಚಕ್ರದೊಂದಿಗೆ ಭಾರತೀಯ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದರು.

ಸಾಂಸ್ಕೃತಿಕ ಸಂಜೆಯು ಭಾರತದ 75 ನೇ ವರ್ಷದ ಸ್ವಾತಂತ್ರ್ಯವನ್ನು ಆಜಾದಿ ಕಾ ಅಮೃತ್ ಮಹೋತ್ಸವದ ಐತಿಹಾಸಿಕ ಸಂದರ್ಭವನ್ನು ಗುರುತಿಸುತ್ತದೆ ಮತ್ತು ರಾಷ್ಟ್ರದ ಪ್ರಮುಖ ರತ್ನಗಳಲ್ಲಿ ಒಬ್ಬರಾದ ಪಿಂಗಳಿ ವೆಂಕಯ್ಯ ಅವರಿಗೆ ಗೌರವವನ್ನು ನೀಡುತ್ತದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top