ಟೋಕಿಯೊ: ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿನ ಭಾರತೀಯ ಪ್ರತಿಭೆಗಳನ್ನು ಜಪಾನ್ ತಯಾರಕ ಮತ್ತು ರಿಟೇಲರ್ ಯುನಿಕ್ಲೋದ ಮುಖ್ಯಸ್ಥರು ಶ್ಲಾಘಿಸಿದ್ದು, ದೇಶದ ಐಟಿ ವಲಯದೊಂದಿಗೆ ಒಟ್ಟಾಗಿ ಕೆಲಸ ಮಾಡುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.
ಸೋಮವಾರ ಟೋಕಿಯೊದಲ್ಲಿ ಯುನಿಕ್ಲೋ ಸಿಇಒ ತದಾಶಿ ಯಾನೈ ಅವರು ಮೋದಿಯೊಂದಿಗೆ ಸಭೆ ನಡೆಸಿದರು. ಭಾರತದಲ್ಲಿ ಯುನಿಕ್ಲೋ ಬೆಳೆಯುತ್ತಿರುವ ರೀತಿ ಮತ್ತು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯಡಿಯಲ್ಲಿ ಜವಳಿ ಉತ್ಪಾದನೆಗೆ ಹೂಡಿಕೆ ಅವಕಾಶಗಳ ಕುರಿತು ಚರ್ಚಿಸಿದರು.
ಪ್ರಧಾನಿ ಮೋದಿ ಅವರು ಜವಳಿಗಳ ಉತ್ಪಾದನಾ ಕೇಂದ್ರವಾಗಲು, ವಿಶೇಷವಾಗಿ ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಿಸುವ ಭಾರತದ ಪ್ರಯಾಣದಲ್ಲಿ ಕೈಜೋಡಿಸುವಂತೆ ತದಾಶಿ ಅವರಿಗೆ ಕರೆ ನೀಡಿದರು.
ಕೈಗಾರಿಕಾ ಅಭಿವೃದ್ಧಿ, ಮೂಲಸೌಕರ್ಯ, ತೆರಿಗೆ ಮತ್ತು ಕಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಂತೆ ಭಾರತದಲ್ಲಿ ವಿದೇಶಿ ಹೂಡಿಕೆದಾರರಿಗೆ ಸುಲಭವಾಗಿ ವ್ಯಾಪಾರ ಮಾಡುವುದನ್ನು ಸುಧಾರಿಸಲು ಕೈಗೊಳ್ಳಲಾಗುತ್ತಿರುವ ವಿವಿಧ ಸುಧಾರಣೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
ಅವರು ವೇಗವಾಗಿ ಬೆಳೆಯುತ್ತಿರುವ ಭಾರತದ ಜವಳಿ ಮತ್ತು ಉಡುಪು ಮಾರುಕಟ್ಟೆ ಮತ್ತು ಭಾರತದಲ್ಲಿ ಜವಳಿ ವಲಯಕ್ಕೆ PLI ಯೋಜನೆಯಡಿಯಲ್ಲಿ ಹೂಡಿಕೆ ಅವಕಾಶಗಳನ್ನು ಚರ್ಚಿಸಿದರು.
“ಭಾರತದಲ್ಲಿ ಉತ್ಪಾದನೆ ಮತ್ತು ಚಿಲ್ಲರೆ ಉದ್ಯಮದಲ್ಲಿ ಹೂಡಿಕೆ ಮಾಡುವುದು ಹೇಗೆ ಎಂಬುದರ ಕುರಿತು ನಾವು ಮಾತನಾಡಿದ್ದೇವೆ. ನಾವು ವಿನ್ಯಾಸದಿಂದ ಬಟ್ಟೆಯವರೆಗೆ ಕಟ್ಟಕಡೆಯ ಉತ್ಪನ್ನಗಳ ಮೇಲೆ ಕೇಂದ್ರೀಕರಿಸಬಹುದು . ಭಾರತದಲ್ಲಿ ಐಟಿ ಪ್ರತಿಭೆಗಳು ಅತ್ಯುತ್ತಮವಾಗಿವೆ. ಐಟಿ ಮಾಡೋಣ ಎಂದು ನಾನು ಪ್ರಧಾನಿ ಮೋದಿಯವರಿಗೆ ಹೇಳಲು ಬಯಸುತ್ತೇನೆ” ಯುನಿಕ್ಲೋ ಸಿಇಒ ತಡಶಿ ಯಾನೈ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.