ನವದೆಹಲಿ: ರಷ್ಯಾ-ಉಕ್ರೇನ್ ಸಂಘರ್ಷವು ಅವಲಂಬನೆಗಳಿಲ್ಲದೆ ಸ್ವಾವಲಂಬಿಯಾಗಿರುವುದು ಬಹುಮುಖ್ಯ ಎಂಬುದನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ನೌಕಾ ಕಮಾಂಡರ್ಗಳ ಸಮ್ಮೇಳನದಲ್ಲಿ ಮಾತನಾಡಿದ ರಾಜನಾಥ್, ಸರ್ಕಾರದ ‘ಆತ್ಮ ನಿರ್ಭರ ಭಾರತ’ ಉಪಕ್ರಮದಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ನೌಕಾಪಡೆಯು ಮುಂದುವರಿಸಬೇಕು ಎಂದು ಹೇಳಿದರು.
“ಕಳೆದ ಕಮಾಂಡರ್ಗಳ ಸಮ್ಮೇಳನದ ನಂತರ P15B ಯೋಜನೆಯ ಮೊದಲ ಹಡಗು INS ವಿಶಾಖಪಟ್ಟಣಂ, ನಾಲ್ಕನೇ P75 ಜಲಾಂತರ್ಗಾಮಿ INS ವೇಲಾ ಮತ್ತು ನೌಕಾಪಡೆಯ ಎರಡನೇ P8I ಸ್ಕ್ವಾಡ್ರನ್ INAS 316 ನಿಯೋಜಿಸಿದ್ದಕ್ಕಾಗಿ ನೌಕಾ ಸೇನೆಯನ್ನು ನಾನು ಅಭಿನಂದಿಸುತ್ತೇನೆ” ಎಂದಿದ್ದಾರೆ.
ಭಾರತೀಯ ನೌಕಾಪಡೆಯು ಭಾರತದಲ್ಲಿ ವಿದೇಶಿ ಸಿಬ್ಬಂದಿಗೆ ತರಬೇತಿಯನ್ನು ನೀಡುತ್ತಿದೆ ಮತ್ತು ಕಳೆದ ನಾಲ್ಕು ದಶಕಗಳಲ್ಲಿ 45 ಕ್ಕೂ ಹೆಚ್ಚು ಸ್ನೇಹಪರ ವಿದೇಶಗಳಿಂದ ಬಂದ 19,000 ಕ್ಕೂ ಹೆಚ್ಚು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದಿದ್ದಾರೆ.
Russia-Ukraine conflict has again highlighted that being self-reliant without dependencies is a vital necessity. Indian Navy, which has been at forefront of ‘Aatma Nirbhar Bharat’ initiative of govt must continue to lead the way: Defence Minister at Naval Commanders' Conference pic.twitter.com/NIloXPDsqG
— ANI (@ANI) April 28, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.