ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಡಮಾನ್-ನಿಕೋಬರ್ನಲ್ಲಿನ ಸೆಲ್ಯುಲರ್ ಜೈಲಿಗೆ ಭೇಟಿ ನೀಡಿದರು ಮತ್ತು ಪೋರ್ಟ್ ಬ್ಲೇರ್ ನಲ್ಲಿ ಹುತಾತ್ಮರ ಸ್ತಂಭಕ್ಕೆ ಪುಷ್ಪಾರ್ಚನೆ ಮಾಡಿದರು. ಮಾತ್ರವಲ್ಲದೆ ಅವರು ವೀರ ಸಾವರ್ಕರ್ ಅವರಿದ್ದ ಸೆಲ್ಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.
ಸೆಲ್ಯುಲರ್ ಜೈಲಿನಲ್ಲಿ ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೃಹ ಸಚಿವರು ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವರು, ನಾನು ಈ ಪವಿತ್ರ ಸ್ಥಳಕ್ಕೆ ಬಂದಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾವರ್ಕರ್ ಮತ್ತು ಸಚಿನ್ ಸನ್ಯಾಲ್ ಅವರನ್ನು ಸ್ಮರಿಸುತ್ತಾ, ಅವರ ತ್ಯಾಗವು ದೇಶಕ್ಕಾಗಿ ಸೇವೆ ಸಲ್ಲಿಸಲು ಅನೇಕ ಯುವಕರನ್ನು ಪ್ರೇರೇಪಿಸಿತು ಎಂದು ಅವರು ಉದ್ಗರಿಸಿದರು.
ಸೆಲ್ಯುಲರ್ ಜೈಲಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರು ತುಂಬಾ ಕಷ್ಟಗಳನ್ನು ಅನುಭವಿಸಿದ್ದಾರೆ ಆದರೆ ಅವರು ಧೃತಿಗೆಡಲಿಲ್ಲ. ಇದು ಅತ್ಯುನ್ನತ ತ್ಯಾಗದ ಭೂಮಿ. ಸೆಲ್ಯುಲಾರ್ ಜೈಲಿಗೆ ಸರ್ಕಾರವು ‘ಅತ್ಯಂತ ಪವಿತ್ರಸ್ಥಳದ ಸ್ಥಾನಮಾನವನ್ನು ನೀಡಿದೆ ಎಂದಿದ್ದಾರೆ.
ಶಾ ಅವರು ಸೆಲ್ಯುಲರ್ ಜೈಲ್ ಸಂಕೀರ್ಣದ ಮುಂಭಾಗದ ಗೇಟ್ನಲ್ಲಿನ ಫಲಕವನ್ನು ಅನಾವರಣಗೊಳಿಸಿದರು.
ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ಮೂರು ದಿನಗಳ ಭೇಟಿಗಾಗಿ ಶಾ ಪೋರ್ಟ್ ಬ್ಲೇರ್ ತಲುಪಿದ್ದಾರೆ.
ಅಂಡಮಾನ್ ನಿಕೋಬಾರ್ 1943 ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ ಮತ್ತು ಬ್ರಿಟಿಷ್ ಆಡಳಿತದಿಂದ ಸ್ವತಂತ್ರವಾಗಿದೆ ಎಂದು ಘೋಷಿಸಿದ ಸ್ಥಳವಾಗಿದೆ. ಸೆಲ್ಯುಲರ್ ಜೈಲಿಗೆ ಭೇಟಿ ನೀಡಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವಂತೆ ಶಾ ಜನರಿಗೆ ಮನವಿ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.