ಮುಂಬಯಿ: ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬುಧವಾರ ಗಮನಾರ್ಹ ಜಯವನ್ನು ದಾಖಲಿಸಿದೆ. ಶಿವಸೇನೆಯ 7 ಜಿಲ್ಲಾ ಪರಿಷತ್ ಸದಸ್ಯರು ಮತ್ತು ಶಿವಸೇನೆ ಶಾಸಕ ತಾನಾಜಿ ಸಾವಂತ್ ಅವರ ಬೆಂಬಲದಿಂದಾಗಿ ಬಿಜೆಪಿ ಈ ಗೆಲುವನ್ನು ಸಾಧಿಸಿದೆ. ಈ ಗೆಲುವು ಶಿವಸೇನೆಗೆ ದೊಡ್ಡ ಮುಖಭಂಗವನ್ನುಂಟು ಮಾಡಿದೆ.
ಜಿಲ್ಲಾ ಪರಿಷತ್ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಸ್ಮಿತಾ ಕಾಂಬ್ಳೆ ಅವರನ್ನು ಕಣಕ್ಕಿಳಿಸಲಾಗಿತ್ತು. ಅವರ ಎದುರಾಳಿಯಾಗಿ ಶಿವಸೇನೆಯ ಅಂಕಿತಾ ಶೆರ್ಕನೆ ಕಣಕ್ಕಿಳಿದಿದ್ದರು.
ಏಳು ಶಿವಸೇನೆ ನಾಯಕರು ಸಾವಂತ್ ಸೂಚನೆಯಂತೆ ಕಾಂಬ್ಳೆ ಪರವಾಗಿ ಮತ ಚಲಾಯಿಸಿದ ನಂತರ ಶೆರ್ಕಾನೆ ಅವರು ಸೋಲನ್ನು ಕಾಣಬೇಕಾಯಿತು. ಕಾಂಬ್ಳೆ ಅವರಿಗೆ 30 ಮತಗಳು ಸಿಕ್ಕವು. ಮತ್ತೊಂದೆಡೆ ಶೆರ್ಕಾನೆ ಅವರಿಗೆ 23 ಮತಗಳು ಬಿದ್ದಿವೆ.
ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದಲ್ಲಿ ಮಂತ್ರಿ ಸ್ಥಾನದಿಂದ ವಂಚಿತರಾದ ಬಳಿಕ ಸಾವಂತ್ ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬಂಡಾಯದ ಬಾವುಟವನ್ನು ಹಾರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.