ನವದೆಹಲಿ: ಇನ್ನು ಮುಂದೆ ಸಂಸತ್ತು ಸದಸ್ಯರುಗಳಿಗೆ ಸಂಸತ್ತಿನ ಕ್ಯಾಂಟೀನುಗಳಲ್ಲಿ ಯಾವುದೇ ರೀತಿಯ ಆಹಾರ ಸಬ್ಸಿಡಿಗಳು ದೊರೆಯುವುದಿಲ್ಲ. ಅವರು ಪೂರ್ಣ ಮೊತ್ತ ತೆತ್ತು ಆಹಾರವನ್ನು ಖರೀದಿ ಮಾಡಬೇಕಾಗುತ್ತದೆ. ಈ ನಿರ್ಧಾರದಿಂದಾಗಿ ಕೇಂದ್ರ ಸರಕಾರದ ಬೊಕ್ಕಸಕ್ಕೆ ವಾರ್ಷಿಕ ಕನಿಷ್ಠ 17 ಕೋಟಿ ರೂ. ಉಳಿತಾಯವಾಗಲಿದೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಈ ಬಗ್ಗೆ ಸಲಹೆ ಸೂಚನೆಗಳನ್ನು ಪಡೆದ ಬಳಿಕ ನಿರ್ಧಾರ ಹೊರಬಿದ್ದಿದೆ. ಈ ನಿರ್ಧಾರಕ್ಕೆ ಎಲ್ಲ ಪಕ್ಷಗಳ ಸದಸ್ಯರುಗಳಿಂದಲೂ ಒಮ್ಮತ ವ್ಯಕ್ತವಾಗಿದೆ ಎಂದು ವರದಿಗಳು ತಿಳಿಸಿವೆ.
ಮೂಲಗಳ ಪ್ರಕಾರ ಲೋಕಸಭೆಯ ವ್ಯವಹಾರ ಸಲಹಾ ಸಮಿತಿಯ ಸಭೆಯಲ್ಲಿ ಸಬ್ಸಿಡಿ ರಹಿತವಾಗಿ ಆಹಾರವನ್ನು ಪಡೆಯಲು ಎಲ್ಲಾ ಪಕ್ಷಗಳ ಸದಸ್ಯರುಗಳು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಸಂಸತ್ತಿ ಸದಸ್ಯರುಗಳಿಗೆ ಕ್ಯಾಂಟೀನಿನಲ್ಲಿ ತೀರಾ ಅಗ್ಗದ ಬೆಲೆಯಲ್ಲಿ ಆಹಾರಗಳು ದೊರೆಯುತ್ತಿದ್ದವು. ಹಾಲಿ ಮತ್ತು ಮಾಜಿ ಸಂಸದರು, ಅಧಿಕಾರಿಗಳು, ಸಂದರ್ಶಕರು ಸಬ್ಸಿಡಿ ಆಹಾರಗಳನ್ನು ಪಡೆಯಲು ಅರ್ಹರಾಗಿದ್ದರು. ಕೇವಲ 106 ರೂ. ಗಳಿಗೆ ಸಂಸದರಿಗೆ ಮೂರು ಹೊತ್ತಿನ ಊಟ ಇಲ್ಲಿ ಸಿಗುತ್ತಿತ್ತು.
ಸಂಸತ್ತಿನ ಕ್ಯಾಂಟೀನ್ ಅನ್ನು ನಾರ್ದನ್ ರೈಲ್ವೆ ಮುನ್ನಡೆಸುತ್ತಿದ್ದು, 2017-18 ರ ಸಾಲಿನಲ್ಲಿ ಇದು ರೂ. 16.43 ಕೋಟಿಯನ್ನು ಲೋಕಸಭಾ ಕಾರ್ಯಾಲಯದಿಂದ ಪಡೆಯಲು ಬೇಡಿಕೆ ಇಟ್ಟಿತ್ತು.
ಇದೀಗ ಸಬ್ಸಿಡಿ ರಹಿತ ಆಹಾರವನ್ನು ಅಂತ್ಯಗೊಳಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಸರ್ಕಾರದ ಖಜಾನೆಗೆ ಸಾಕಷ್ಟು ಹಣ ಉಳಿತಾಯವಾಗಲಿದೆ. ಸಾರ್ವಜನಿಕರ ದುಡ್ಡು ಪೋಲಾಗುವುದು ತಪ್ಪಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.