ನವದೆಹಲಿ: ಭಾರತೀಯ ನೌಕಾಪಡೆ ತನ್ನ ರಕ್ಷಣಾ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ದೂರದ ಹಳ್ಳಿಯೊಂದರಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಗರ್ಭಿಣಿ ಮಹಿಳೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ.
ಮಹಿಳೆಗೆ ಬುಧವಾರ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ, ಆದರೆ, ಅವರಿದ್ದ ಪ್ರದೇಶದ ಹತ್ತಿರದಲ್ಲಿ ಯಾವುದೇ ಆರೋಗ್ಯ ಕೇಂದ್ರಗಳೂ ಲಭ್ಯವಿರಲಿಲ್ಲ. ಈ ಕಾರಣ, ಮಹಿಳೆಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿಲ್ಲ. ಈ ಸಮಯದಲ್ಲಿ ನೌಕಾಸೇನೆಯ ಯೋಧರು ಅವರ ರಕ್ಷಣೆ ಧಾವಿಸಿ, ಅವರನ್ನು ಮತ್ತು ಮಗುವನ್ನು ಕಾಪಾಡಿದ್ದಾರೆ.
ಮಹಿಳೆ ಇದ್ದ ಸ್ಥಿತಿಯಲ್ಲಿ ಆಕೆಯನ್ನು 20 ಕಿ.ಮೀ ಕಷ್ಟಕರ ಭೂಪ್ರದೇಶದಲ್ಲಿ ಸಾಗಿಸುವುದು ಅಸಾಧ್ಯವೆಂದು ಅಲ್ಲಿನ ನಾಗರಿಕ ಆಡಳಿತವು ಕಂಡುಕೊಂಡ ಹಿನ್ನಲೆಯಲ್ಲಿ ರಕ್ಷಣೆಗಾಗಿ ಭಾರತೀಯ ನೌಕಾಪಡೆಗೆ ತುರ್ತು ಕರೆಯನ್ನು ಮಾಡಲಾಗಿತ್ತು.
ಕಮೊರ್ಟ ಐಸ್ಲ್ಯಾಂಡಿನಲ್ಲಿ ನೌಕಾ ಹಡಗು ಕರ್ದಿಪ್ ಅನ್ನು ತಕ್ಷಣ ಮಹಿಳೆ ಇದ್ದ ಪ್ರದೇಶದತ್ತ ಕೊಂಡೊಯ್ಯಲಾಗಿದೆ. ಈ ಹಡಗಿನಲ್ಲಿ ನೌಕಾಪಡೆಯ ವೈದ್ಯಕೀಯ ಅಧಿಕಾರಿ, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು. ಸಂಜೆ 4:30ಕ್ಕೆ ಹಡುಗು ಮಹಿಳೆಯ ಗ್ರಾಮವನ್ನು ತಲುಪಿತ್ತು.
ಹಡಗಿನಲ್ಲಿ ಮಹಿಳೆಯನ್ನು ಆಸ್ಪತ್ರೆಯತ್ತ ಸಾಗಿಸಲಾಗಿತ್ತು. ಆದರೆ ಮಹಿಳೆಯ ಪರಿಸ್ಥಿತಿಯ ಹಿನ್ನಲೆಯಲ್ಲಿ ಹಡಗು ನಿಧಾನಕ್ಕೆ ಚಲಿಸಿತ್ತು. ಆಸ್ಪತ್ರೆ ತಲುಪುವ ಮುನ್ನವೇ ಆಕೆಗೆ ಹಡಗಿನಲ್ಲಿ ಹೆರಿಗೆ ಆಗಿದೆ. ಬಳಿಕ ತಾಯಿ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೌಕಾಸೇನಾ ಈ ಕಾರ್ಯಾಚರಣೆ ಅತ್ಯಂತ ಸೂಕ್ಷ್ಮ ಮತ್ತು ಕಷ್ಟಕರವಾಗಿತ್ತು, ಆದರೂ ಎದೆಗುಂದದೆ ಎಲ್ಲವನ್ನೂ ಸಲಿಸುಗೊಳ್ಳುವಂತೆ ಮಾಡಿದ್ದಾರೆ ನೌಕಾ ಯೋಧರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.