ಕಲ್ಬುರ್ಗಿ: ಕೃಷಿಯ ಬಗೆಗೆ ತನಗಿರುವ ಒಲವನ್ನು ಅನುಸರಿಸುವ ಸಲುವಾಗಿ ಕಲ್ಬುರ್ಗಿ ಜಿಲ್ಲೆಯ ನಂದಿಕೂರ್ ಗ್ರಾಮದ ಶರಣಗೌಡ ಪಾಟೀಲ್ ಅವರು ತಮ್ಮ ಸರ್ಕಾರಿ ಹುದ್ದೆಯನ್ನೇ ತೊರೆದಿದ್ದಾರೆ. ಇದೀಗ ಕೃಷಿ ಮತ್ತು ತೈಲ ಗಿರಣಿ ಉದ್ಯಮದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.
32 ಶರಣಗೌಡ ಅವರು 2016 ರಲ್ಲಿ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗೆ ರಾಜೀನಾಮೆ ನೀಡಿ ತೈಲ ಗಿರಣಿ ವ್ಯಾಪಾರ ಮತ್ತು ಹೂವಿನ ಕೃಷಿಯನ್ನು ಪ್ರಾರಂಭಿಸಿದರು.
ಈ ಬಗ್ಗೆ ಮಾತನಾಡಿರುವ ಅವರು, “ನಾನು ಕಲಾ ವಿಷಯದಲ್ಲಿ ಸ್ನಾತಕೋತ್ತರ ಪದವೀಧರನಾಗಿದ್ದೇನೆ. ನಾನು ಬೆಂಗಳೂರಿನಲ್ಲಿ ಮೂರು ವರ್ಷಗಳ ಕಾಲ ಕಾನ್ಸ್ಟೆಬಲ್ ಆಗಿ ಕೆಲಸ ಮಾಡಿದ್ದೇನೆ, ಆದರೆ ನಂತರ ನನಗೆ ಅದರಲ್ಲಿ ಆಸಕ್ತಿ ಹೋಯಿತು ಮತ್ತು 2014ರಲ್ಲಿ ಕೆಲಸವನ್ನು ತ್ಯಜಿಸಿದೆ, ಕೃಷಿಯನ್ನು ಮುಂದುವರಿಸಲು ಪ್ರಾರಂಭಿಸಿದೆ. ಸಾವಯವ ತೈಲವನ್ನು ಉತ್ಪಾದಿಸುತ್ತಿದ್ದೇನೆ ಮತ್ತು ಕೃಷಿ ಮತ್ತು ತೈಲ ಗಿರಣಿ ವ್ಯವಹಾರ ಎರಡಕ್ಕೂ ನಾನು ಉತ್ತಮ ಮಾರುಕಟ್ಟೆ ಸ್ಪಂದನೆಯನ್ನು ಪಡೆಯುತ್ತಿದ್ದೇನೆ. ನನ್ನ ಹಿಂದಿನ ಉದ್ಯೋಗಕ್ಕೆ ಹೋಲಿಸಿದರೆ ಈಗ ನಾನು ದ್ವಿಗುಣ ಆದಾಯವನ್ನು ಗಳಿಸುತ್ತೇನೆ “ಎಂದಿದ್ದಾರೆ.
“ನನಗಾಗಿ ಕೆಲಸ ಮಾಡುವುದು ನನಗೆ ಸಂತೋಷ ನೀಡುತ್ತದೆ, ಇತರರಿಗೂ ಇದರಿಂದ ಒಳ್ಳೆಯದಾಗುತ್ತದೆ. ಈಗ ನನ್ನ ಜೀವನ ಉತ್ತಮವಾಗಿದೆ. ಉದ್ಯೋಗ ಸಿಗಲಿಲ್ಲ ಎಂದು ಯಾರೂ ಬೇಜಾರಾಗಬಾರದು. ತಮ್ಮ ಆಸಕ್ತಿಯ ಉದ್ಯಮವನ್ನು ಆರಂಭಿಸಬೇಕು” ಎಂದಿದ್ದಾರೆ.
ಅಷ್ಟೇ ಅಲ್ಲದೇ ಇವರು ಗ್ರಾಮಸ್ಥರಿಗಾಗಿ ಎರಡು ವಿಧದ ತೈಲ ಬೀಜಗಳನ್ನು ಉತ್ಪಾದನೆ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಗ್ರಾಮದ ಜನರನ್ನು ಅನಾರೋಗ್ಯಕರ ಖಾದ್ಯ ತೈಲಗಳಿಂದ ದೂರವಿಡುತ್ತಿದ್ದಾರೆ.
ಪಾಟೀಲ್ ಗ್ರಾಮದ ಇತರ ರೈತರು ಮತ್ತು ಯುವಕರಿಗೆ ನಿಜವಾದ ಸ್ಫೂರ್ತಿಯಾಗಿದ್ದಾರೆ. ಮಾತ್ರವಲ್ಲದೇ, ನಂದಿಕೂರ್ ಗ್ರಾಮದ ಜನರಿಗೆ ಉದ್ಯೋಗಾವಕಾಶಗಳನ್ನೂ ಒದಗಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.