ನವದೆಹಲಿ: ರಾಷ್ಟ್ರದ ವೈವಿಧ್ಯತೆಯಲ್ಲಿ ಏಕತೆಯನ್ನು ಆಚರಿಸುವ ಮತ್ತು ದೇಶದ ಜನರಲ್ಲಿ ವ್ಯಾಪಕವಾದ ಭಾವನಾತ್ಮಕ ಬಂಧಗಳನ್ನು ಮರುಜೋಡಿಸುವ ಮತ್ತು ಸಂರಕ್ಷಿಸುವ ಉದ್ದೇಶದಿಂದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ನಾಲ್ಕು ದಿನಗಳ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಉತ್ಸವ “ಕೆವಿಎಸ್- ಏಕ್ ಭಾರತ್ ಶ್ರೇಷ್ಠ್ ಭಾರತ್ ಪರ್ವ್ ಅನ್ನು ಇಂಡಿಯಾ ಗೇಟ್ನಲ್ಲಿ ಉದ್ಘಾಟಿಸಿದರು.
ಈ ವರ್ಷ 2375 ವಿದ್ಯಾರ್ಥಿಗಳು ಈ ಮೆಗಾ ಈವೆಂಟ್ನ ಭಾಗವಾಗಲಿದ್ದಾರೆ. ಈ ಕಾರ್ಯಕ್ರಮದ ವಿಶಿಷ್ಟತೆ ಎಂದರೆ ರಾಷ್ಟ್ರದ ಒಂದು ಭಾಗದ ವಿದ್ಯಾರ್ಥಿಗಳು ದೇಶದ ಮತ್ತು ಪ್ರಪಂಚದ ಇನ್ನೊಂದು ಭಾಗದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುವುದು. 4 ದಿನಗಳ ಕಾಲ ಈ ಮೆಗಾ ಕಾರ್ಯಕ್ರಮ ನಡೆಯಲಿದೆ.
‘ಏಕ್ ಭಾರತ್ ಶ್ರೇಷ್ಠ ಭಾರತ್’ ಕನಸನ್ನು ಸಾಧಿಸುವ ಸಲುವಾಗಿ ಕೆವಿಎಸ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಚಿವರು ಹೇಳಿದರು. ಹೊಸ ಭಾರತವನ್ನು ರೂಪಿಸುವ ನಮ್ಮ ಪಯಣದಲ್ಲಿ, 2021ರ ವೇಳೆಗೆ ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ವಿಶ್ವ ನಾಯಕರಾಗುವುದು ನಮ್ಮ ಮುಂದೆ ಇರುವ ದೊಡ್ಡ ಸವಾಲಾಗಿದೆ ಎಂದಿದ್ದಾರೆ.
ಪರ್ವದ ಮೊದಲ ದಿನದಲ್ಲಿ ‘ಶೋಭಯಾತ್ರೆ’ ಜರುಗಲಿದೆ. ವಿವಿಧ ಸಾಂಸ್ಕೃತಿಕ ವೈವಿಧ್ಯತೆಗಳು ಇಲ್ಲಿ ಅನಾವರಣಗೊಳ್ಳಲಿದೆ. ಗುಂಪು ನೃತ್ಯ, ರಸಪ್ರಶ್ನೆ, ಸೃಜನಶೀಲ ಬರವಣಿಗೆ, ಸ್ಪೆಲ್ ಬಿ, ಚರ್ಚೆ, ಪೇಟಿಂಗ್, ಹಾಡುಗಾರಿಕೆ ಮುಂತಾದ ಸ್ಪರ್ಧೆಗಳೂ ನಡೆಯಲಿದೆ.
ದೇಶದ ವಿವಿಧ ಖಾದ್ಯಗಳು, ಸಂಗೀತಗಳು, ನಾಟಕಗಳು, ಕರಕುಶಲ ವಸ್ತುಗಳು, ಸಾಹಿತ್ಯ, ಹಬ್ಬ, ಕಲೆ, ಶಿಲ್ಪ ಮುಂತಾದುವುಗಳೂ ಇಲ್ಲಿ ಅನಾವರಣಗೊಳ್ಳಲಿದೆ.
भारतीय संस्कृति की अनोखी छटा बिखेरने के साथ इस कार्यक्रम द्वारा विभिन्न उद्देश्यों और राज्यों की संस्कृति को प्रदर्शनी के माध्यम से उजागर किया गया । कार्यक्रम में मानव संसाधन विकास राज्य मंत्री श्री @SanjayDhotreMP जी की गरिमामयी उपस्थिति भी रही । pic.twitter.com/9pIRUKyuvk
— Dr Ramesh Pokhriyal Nishank (@DrRPNishank) ಅಕ್ಟೋಬರ್ 31, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.