ನವದೆಹಲಿ: ಹವಾಮಾನ ಬದಲಾವಣೆ ಮತ್ತು ಅರಣ್ಯ ನಾಶವನ್ನು ತಡೆಗಟ್ಟುವ ಪ್ರಯತ್ನದ ಭಾಗವಾಗಿ, ಗುಜರಾತ್ನಿಂದ ದೆಹಲಿ-ಹರಿಯಾಣ ಗಡಿಯವರೆಗೆ 1,400 ಕಿ.ಮೀ ಉದ್ದ ಮತ್ತು 5 ಕಿ.ಮೀ ಅಗಲದ ‘ಗ್ರೇಟ್ ಗ್ರೀನ್ ಬೆಲ್ಟ್’ ರಚಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಗಂಭೀರ ಹೆಜ್ಜೆಯನ್ನಿಟ್ಟಿದೆ.
ಈ ಯೋಜನೆಯು ಆರಂಭಿಕ ಹಂತದಲ್ಲಿದ್ದರೂ, ವಿವಿಧ ಸಚಿವಾಲಯಗಳ ಅಧಿಕಾರಿಗಳಿಗೆ ಇದು ಸಾಕಷ್ಟು ಉತ್ಸಾಹವನ್ನು ನೀಡುತ್ತಿದೆ. ಈ ಯೋಜನೆಗೆ ಅನುಮೋದನೆ ದೊರೆತರೆ ಅದು ದೇಶಕ್ಕೆ ಒಂದು ಪರಂಪರೆಯಾಗಿ ಪ್ರಭಾವ ನೀರುತ್ತದೆ ಎಂದು ಅಧಿಕಾರಿಗಳು ನಂಬಿದ್ದಾರೆ. ವರದಿಯ ಪ್ರಕಾರ, ಪೋರ್ಬಂದರ್ನಿಂದ ಪಾಣಿಪತ್ವರೆಗೆ ಗ್ರೀನ್ ಬೆಲ್ಟ್ ರಚಿಸುವ ಚಿಂತನೆಯು ಅರಾವಳಿ ಬೆಟ್ಟ ಶ್ರೇಣಿಯಾದ್ಯಂತದ ಅರಣ್ಯನಾಶವನ್ನು ತಪ್ಪಿಸಿ ಹಸಿರನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಪಶ್ಚಿಮ ಭಾರತ ಮತ್ತು ಪಾಕಿಸ್ಥಾನದ ಮರುಭೂಮಿಗಳಿಂದ ಬರುವ ಧೂಳಿಗೆ ಬೆಲ್ಟ್ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ.
ಬೆಲ್ಟ್ ರಾಜ್ಯಗಳು ಮತ್ತು ನಗರಗಳು ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯ ನಗರಗಳನ್ನು ಒಳಗೊಳ್ಳಲಿವೆ. ಭಾರತದಲ್ಲಿ ಇತ್ತೀಚೆಗೆ ನಡೆದ ವಿಶ್ವಸಂಸ್ಥೆಯ ಕನ್ವೆನ್ಷನ್ ಟು ಕಾಂಬ್ಯಾಟ್ ಡೆಸರ್ಟಿಫಿಕೇಶನ್ (ಯುಎನ್ಸಿಸಿಡಿ) ಸಮ್ಮೇಳನದ ಕಾರ್ಯಸೂಚಿಯ ಭಾಗವಾಗಿದೆ ಗ್ರೀನ್ ಬೆಲ್ಟ್ ಯೋಜನೆ ಎಂದು ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಯೋಜನೆಯು ಔಪಚಾರಿಕ ಅನುಮೋದನೆಗಾಗಿ ಕಾಯುತ್ತಿದೆ.
ಭಾರತವು ಆಫ್ರಿಕಾದ ‘ಗ್ರೇಟ್ ಗ್ರೀನ್ ವಾಲ್’ ಕಲ್ಪನೆಯನ್ನು ಪುನರಾವರ್ತಿಸಲು ಪ್ರಯತ್ನಿಸುತ್ತಿದೆ. ಈ ಯೋಜನೆಯನ್ನು ಸುಮಾರು ಒಂದು ದಶಕದ ಹಿಂದೆಯೇ ರೂಪಿಸಲಾಗಿದ್ದರೂ ಕೂಡ, ಪ್ರಸ್ತುತ ಇಲ್ಲಿನ ಅಧಿಕಾರಿಗಳು ಇದನ್ನು ರಾಷ್ಟ್ರೀಯ ಆದ್ಯತೆಯ ಯೋಜನೆ ಎಂದು ಪರಿಗಣಿಸಲು ಮುಂದಾಗಿದ್ದಾರೆ.. ಈ ಕಲ್ಪನೆಯನ್ನು 2030 ರೊಳಗೆ ಜಾರಿಗೆ ತರಲು ಯೋಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.