ಛತ್ತೀಸ್ಗಢ ಬಸ್ತರ್ ಪ್ರದೇಶ ನಕ್ಸಲ್ ಪೀಡಿತವಾಗಿದೆ. ಇಲ್ಲಿ ಸರಿಯಾದ ವೈದ್ಯಕೀಯ ವ್ಯವಸ್ಥೆ, ಮೂಲಸೌಕರ್ಯಗಳ ಕೊರತೆಯೂ ಇದೆ. ಆದರೆ ಇಲ್ಲಿನ ಕೊಂಡಾಂವ್ ಏರಿಯಾದ ಜನರಿಗೆ ಐಪಿಎಸ್ ಅಧಿಕಾರಿಯ ರೂಪದಲ್ಲಿ ಒಬ್ಬ ರಕ್ಷಕ ಸಿಕ್ಕಿದ್ದಾನೆ. ಈತ ಅವರನ್ನು ಸಂಕಷ್ಟದಿಂದ ಮೇಲೆತ್ತಲು ಹಗಲಿರುಳು ಶ್ರಮಿಸುತ್ತಿದ್ದಾರೆ.
ಆತನೇ ವೈದ್ಯನೂ ಆಗಿರುವ ಐಪಿಎಸ್ ಅಧಿಕಾರಿ ಅಭಿಷೇಕ್ ಪಲ್ಲವ. 2013ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಇವರು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಿಂದ ಎಂಡಿ ಪದವಿಯನ್ನೂ ಪಡೆದುಕೊಂಡಿದ್ದಾರೆ. ಪ್ರಸ್ತುತ ಕೊಂಡಗಾಂವ್ನ ಸೂಪರೀಟೆಂಟೆಂಟ್ ಆಫ್ ಪೊಲೀಸ್ ಆಗಿದ್ದಾರೆ.
ನಕ್ಸಲ್ ಕಾರ್ಯಾಚರಣೆಯ ವೇಳೆ ಗಾಯಗೊಂಡು ಒದ್ದಾಡುವ ನಕ್ಸಲರ ಮಕ್ಕಳಿಗೆ, ಪತ್ನಿಯಂದಿರಿಗೆ ಇವರು ಪ್ರಥಮ ಚಿಕಿತ್ಸೆಯನ್ನು ನೀಡಿ ಮಾನವೀಯತೆ ಮೆರೆಯುತ್ತಾರೆ.
ಇತ್ತೀಚಿಗಷ್ಟೇ ಪೊಹ್ರೂ ಎಂಬ ನಕ್ಸಲನ ಬೇಟೆಗೆ ಇಳಿದಿದ್ದ ಇವರ ತಂಡಕ್ಕೆ ಕಾಡಿನ ನಡುವೆ ಸಿಕ್ಕಿದ್ದು ಆತನ ಅನಾರೋಗ್ಯ ಪೀಡಿತ ಪತ್ನಿ ಮತ್ತು ಅಪೌಷ್ಠಿಕತೆಯಿಂದ ನರಳುತ್ತಿದ್ದ ಮೂವರು ಮಕ್ಕಳು. ಅಲ್ಲೇ ಅವರಿಗೆ ಆಂಟಿಬಯೋಟಿಕ್, ಶೀತ, ಕೆಮ್ಮಿನ ಔಷಧಿ ನೀಡಿ ಪ್ರಥಮ ಚಿಕಿತ್ಸೆ ಮಾಡಿದ ಪಲ್ಲವ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಕೆ ಬಂಧನದ ಭೀತಿಯಲ್ಲಿ ಆಸ್ಪತ್ರೆಗೆ ಬರಲು ನಿರಾಕರಿಸಿದರೂ ಆಕೆಯ ಮನವೊಲಿಸುವಲ್ಲಿ ಇವರು ಯಶಸ್ವಿಯಾಗಿದ್ದರು.
ಬುಡಕಟ್ಟು ಜನರೊಂದಿಗೆ ಬಾಂಧವ್ಯ ಬೆಸೆಯುವುದರಿಂದ ನಕ್ಸಲ್ ಸಮಸ್ಯೆಯನ್ನು ಬಗೆಹರಿಸಬಹುದು ಎಂಬ ಬಲವಾದ ನಂಬಿಕೆಯನ್ನೂ ಪಲ್ಲವ ಹೊಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.