ನವದೆಹಲಿ: ಹಿಮಾಲಯದಲ್ಲಿ 9 ಸಾವಿರ ಅಡಿ ಎತ್ತರದಲ್ಲಿ ನಿಯೋಜಿತಗೊಂಡಿರುವ ಸೇನಾಪಡೆಗಳಿಗೆ ವಿಶೇಷ ವಸ್ತ್ರ ಹಾಗೂ ಪರ್ವತಾರೋಹಣ ಪರಿಕರಗಳನ್ನು ಒದಗಿಸುವ ಪ್ರಸ್ತಾವಣೆಯ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಪ್ರಸ್ತುತ 14 ಸಾವಿರ ಅಡಿ ಎತ್ತರದ ಹಿಮಾಲಯಗಳಲ್ಲಿ ನಿಯೋಜಿತಗೊಂಡಿರುವ ಇಂಡೋ-ಟಿಬೆಟಿಯನ್ ಪೊಲೀಸ್ ಪಡೆಗಳಿಗೆ ವಿಶೇಷ ವಸ್ತ್ರ ಹಾಗೂ ಪರ್ವತಾರೋಹಣ ಪರಿಕರಗಳನ್ನು ಒದಗಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಸರ್ಕಾರದ ಈ ಯೋಜನೆಯಿಂದಾಗಿ ಶೇ.80ರಷ್ಟು ಇಂಡೋ-ಟಿಬೆಟಿಯನ್ ಪೊಲೀಸ್ ಪಡೆಗಳು ವಿಶೇಷ ವಸ್ತ್ರ ಹಾಗೂ ಪರ್ವತಾರೋಹಣ ಪರಿಕರಗಳನ್ನು ಪಡೆದುಕೊಂಡಿದ್ದಾರೆ.
ಇದೀಗ ಈ ಯೋಜನೆಯನ್ನು 9 ಸಾವಿರ ಅಡಿ ಎತ್ತರದ ಹಿಮಾಲಯದಲ್ಲಿ ನಿಯೋಜನೆಗೊಂಡಿರುವ ಯೋಧರಿಗೂ ವಿಸ್ತರಿಸುವ ಬಗ್ಗೆ ಕೇಂದ್ರ ಪರಿಶೀಲನೆ ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.