ನವದೆಹಲಿ: ಕುಲಭೂಷಣ್ ಜಾಧವ್ ಅವರ ಪತ್ನಿ ಮತ್ತು ತಾಯಿಗೆ ಇಸ್ಲಾಮಾಬಾದ್ ಭೇಟಿಯ ವೇಳೆ ಅವಮಾನ ಮಾಡಿದ ಪಾಕಿಸ್ಥಾನದ ವಿರುದ್ಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಿಡಿಕಾರಿದ್ದಾರೆ.
ಸಂಸತ್ತಿನಲ್ಲಿ ಶುಕ್ರವಾರ ಈ ಬಗ್ಗೆ ಹೇಳಿಕೆ ನೀಡಿದ ಅವರು, ‘ಪಾಕಿಸ್ಥಾನ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ ಅಪರಾಧಿ, ಅದರ ವರ್ತನೆ ಊಹಿಸಲು ಸಾಧ್ಯವಿಲ್ಲದಷ್ಟು ಅಸಂಬದ್ಧವಾಗಿತ್ತು. ಮೊದಲೇ ಯೋಜನೆಯಾಗಿದ್ದ ಒಪ್ಪಂದಗಳನ್ನು ಅದು ಉಲ್ಲಂಘಿಸಿದೆ’ ಎಂದಿದ್ದಾರೆ.
’’ತಾಯಿಯೊಬ್ಬಳು ತನ್ನ ಮಗನನ್ನು, ಪತ್ನಿಯೊಬ್ಬಳು ತನ್ನ ಪತಿಯನ್ನು 22 ತಿಂಗಳಗಳ ಬಳಿಕ ಭೇಟಿಯಾದರು. ಆದರೆ ಇದನ್ನು ಪಾಕಿಸ್ಥಾನ ಒಂದು ಅಸ್ತ್ರವಾಗಿ ಬಳಸಿದೆ. ಜಾಧವ್ ಕುಟುಂಬದ ಸಮೀಪ ಮಾಧ್ಯಮಗಳನ್ನು ಬಿಡದಂತೆ ಮನವಿ ಮಾಡಿದ್ದೆವು. ಆದರೆ ಅಲ್ಲಿನ ಮಾಧ್ಯಮಗಳು ಇವರ ಸಮೀಪ ಬಂದಿದ್ದು ಮಾತ್ರವಲ್ಲ, ಇವರಿಗೆ ಅವಮಾನವನ್ನೂ ಮಾಡಿವೆ’ ಎಂದಿದ್ದಾರೆ.
ಭೇಟಿಯ ವೇಳೆ ಬಟ್ಟೆಯನ್ನು ಬದಲಾಯಿಸಿದರು, ಮಂಗಳಸೂತ್ರ, ಕುಂಕುಮವನ್ನು ತೆಗೆಯಲು ಸೂಚಿಸಿದರು, ಮರಾಠಿಯಲ್ಲಿ ಮಾತನಾಡಲು ಬಿಡಲಿಲ್ಲ, ಜಾಧವ್ ಪತ್ನಿ ಶೂಗಳನ್ನು ಕಿತ್ತುಕೊಂಡು ವಾಪಾಸ್ ಮಾಡಲಿಲ್ಲ. ಚಪ್ಪಲಿಯಲ್ಲಿ ಚಿಪ್ಗಳಿರುವ ಬಗ್ಗೆ ಪಾಕ್ ಅನುಮಾನ ವ್ಯಕ್ತಪಡಿಸಿದೆ. ಆದರೆ ಅವರು ದುಬೈ ವಿಮಾನನಿಲ್ದಾಣದಲ್ಲಿ ಇದೇ ಶೂ ಧರಿಸಿದ್ದರು. ಆವಾಗ ಚಿಪ್ ಯಾಕೆ ಪತ್ತೆಯಾಗಿಲ್ಲ ಎಂದು ಸುಷ್ಮಾ ಪ್ರಶ್ನಿಸಿದ್ದಾರೆ.
ಹಿಂದೂ ಮಹಿಳೆಯರ ಮೂಲ ನಂಬಿಕೆಯನ್ನು ಅರ್ಥ ಮಾಡಿಕೊಳ್ಳದೆ ದುರ್ವತನೆ ತೋರಿದ ಪಾಕ್ ವಿರುದ್ಧ ಸುಷ್ಮಾ ತೀವ್ರ ಟೀಕಾಪ್ರಹಾರ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.