
1669 ರಲ್ಲಿ ಮುಘಲ್ ಚಕ್ರವರ್ತಿ ಔರಂಗಜೇಬ್ ಉತ್ತರ ಭಾರತದಾದ್ಯಂತ ಪ್ರಮುಖ ಹಿಂದೂ ದೇವಾಲಯಗಳನ್ನು ವ್ಯವಸ್ಥಿತವಾಗಿ ನಾಶಮಾಡುವ ಆದೇಶ ಹೊರಡಿಸಿದ. ಕೆಲವೇ ತಿಂಗಳುಗಳಲ್ಲಿ ಮಥುರಾ ಮತ್ತು ಬ್ರಜ್ ಪ್ರದೇಶದ ಪವಿತ್ರ ದೇವಾಲಯಗಳು ಧ್ವಂಸವಾದವು. ಶ್ರೀಕೃಷ್ಣನ ಬಾಲರೂಪವಾದ ಶ್ರೀನಾಥಜಿಯಂತಹ ಅತ್ಯಂತ ಪ್ರಿಯ ದೇವರ ಮೂರ್ತಿಗೆ ಅಪಾಯ ಎದುರಾಯಿತು. ದೇಗುಲವನ್ನು ನಾಶ ಮಾಡಲಾಯಿತು ಆದರೆ ಮೂರ್ತಿ ದೇವಾಲಯದೊಂದಿಗೆ ನಾಶವಾಗಲಿಲ್ಲ. ಅದನ್ನು ಸ್ಥಳಾಂತರಗೊಂಡಿತ್ತು.
ಸುಮಾರು 32 ತಿಂಗಳು ಉತ್ತರ ಭಾರತದಾದ್ಯಂತ ರಹಸ್ಯವಾಗಿ ಸಂಚರಿಸಲ್ಪಟ್ಟ ಈ ಮೂರ್ತಿ ಕೊನೆಗೆ ಸುರಕ್ಷಿತವಾಗಿ ಮೇವಾಡ್ನ ಸಿಂಹದ್ (ನಂತರದ ನಾಥದ್ವಾರಾ)ನಲ್ಲಿ ಸ್ಥಾಪನೆಗೊಂಡಿತು. ಔರಂಗಜೇಬನ ಅತ್ಯಂತ ದಬ್ಬಾಳಿಕೆಯ ಕಾಲದಲ್ಲೂ ಈ ಪವಿತ್ರ ಮೂರ್ತಿ ಹೇಗೆ ಬದುಕಿತು? ಇದಕ್ಕೆ ಉತ್ತರ1671 ರಲ್ಲಿ ಮೇವಾಡ್ನ ಮಹಾರಾಣ ರಾಜ್ ಸಿಂಗ್ ತೆಗೆದುಕೊಂಡ ನಿರ್ಧಾರದಲ್ಲಿ ಇದೆ.
ಶ್ರೀನಾಥಜಿ ಮೂರ್ತಿ ಮಥುರಾದಿಂದ ಮೇವಾರಗೆ ಪ್ರಯಾಣ
1970 ರಲ್ಲಿ ಮಥುರಾದ ಕೇಶವರಾಯ ದೇವಾಲಯದ ನಾಶದ ಸುದ್ದಿ ವೈಷ್ಣವ ಸಮುದಾಯಗಳಲ್ಲಿ ಆಘಾತ ಉಂಟುಮಾಡಿತು. ಸೈನಿಕರು ಬಂದು ವಶಪಡಿಸಿಕೊಳ್ಳುವ ಮೊದಲೇ ಭಕ್ತರು ಪವಿತ್ರ ಮೂರ್ತಿಗಳನ್ನು ತೆಗೆದುಕೊಂಡು ಓಡಿದರು. ಅವುಗಳಲ್ಲಿ ಗೋವರ್ಧನದಲ್ಲಿ ಪೂಜಿತವಾಗುತ್ತಿದ್ದ ಶ್ರೀನಾಥಜಿಯ ಮೂರ್ತಿಯೂ ಇತ್ತು. ಸುಮಾರು ಎರಡು ವರ್ಷಗಳ ಕಾಲ (1669-1671) ಮೂರ್ತಿಯನ್ನು ಉತ್ತರ ಭಾರತದಾದ್ಯಂತ ರಹಸ್ಯವಾಗಿ ಸಾಗಿಸಲಾಯಿತು – ಆಗ್ರಾ, ಬುಂದಿ, ಕೋಟಾ, ಕಿಶನ್ಗಢ್, ಜೋಧ್ಪುರ್ ಬಳಿಯ ಚೋಪಾಸಣಿ ಮುಂತಾದ ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಇರಿಸಲಾಯಿತು.
ಆದರೆ ಔರಂಗಜೇಬ್ನ ಕೋಪಕ್ಕೆ ಭಯಪಟ್ಟು ಯಾವುದೇ ರಾಜ್ಯವು ಆಶ್ರಯ ನೀಡಲು ಹಿಂಜರಿಯಿತು. ಕೊನೆಗೆ 1671ರಲ್ಲಿ ಗೋಸ್ವಾಮಿ ಗೋವಿಂದ ರಾಯ್ಜಿ ಮೇವಾಡ್ನ ಮಹಾರಾಣ ರಾಜ್ ಸಿಂಗ್ರವರ ಬಳಿ ಬಂದರು. ಮೇವಾಡ್ ಸಣ್ಣ ಸಂಸ್ಥಾನವಲ್ಲ – ಮುಘಲ್ರಿಗೆ ಸಂಪೂರ್ಣ ಶರಣಾಗತಿಯಾಗದ ಕೆಲವೇ ರಾಜಪೂತ ರಾಜ್ಯಗಳಲ್ಲಿ ಒಂದು. ರಾಜ್ ಸಿಂಗ್ ಅವರು ಆಶ್ರಯ ನೀಡಿದರು. ಅವರು ಧೈರ್ಯದಿಂದ ಹೇಳಿದರು: “ಶ್ರೀನಾಥಜಿಯ ಮೂರ್ತಿಯನ್ನು ಔರಂಗಜೇಬ್ ಸ್ಪರ್ಶಿಸಲು ಬಯಸಿದರೆ, ಮೊದಲು ಒಂದು ಲಕ್ಷ ರಜಪೂತ ಸೈನಿಕರ ದೇಹಗಳನ್ನು ತುಳಿದು ಬರಬೇಕು!”
1671ರ ನವೆಂಬರ್ನಲ್ಲಿ ಮೂರ್ತಿಯನ್ನು ಮೇವಾಡ್ಗೆ ತರಲಾಯಿತು. ಮಹಾರಾಣರು ಸ್ವತಃ ರಾಜ್ಯದ ಗಡಿಯಲ್ಲಿ ಸ್ವಾಗತಿಸಿದರು. 1672ರ ಮಾರ್ಚ್ 10ರಂದು ಸಿಹದ್ (ಘಾಸಿಯಾರ್) ಎಂಬ ಗ್ರಾಮದಲ್ಲಿ ಮೂರ್ತಿಯನ್ನು ಸ್ಥಾಪಿಸಲಾಯಿತು – ಅದು ನಂತರ ನಾಥದ್ವಾರಾ ಎಂದು ಪ್ರಸಿದ್ಧವಾಯಿತು.
ದೈವೀ ಸಂಕೇತ: ರಥದ ಚಕ್ರ ಸಿಲುಕಿದ ಸ್ಥಳ
ಪ್ರಯಾಣದ ಸಮಯದಲ್ಲಿ ಶ್ರೀನಾಥಜಿಯ ಮೂರ್ತಿಯನ್ನು ಹೊತ್ತ ರಥದ ಚಕ್ರ ಸಿಹದ್ ಬಳಿ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿತು. ಇದನ್ನು ಮಹಾರಾಣ ರಾಜ್ ಸಿಂಗ್ ದೈವೀ ಸಂಕೇತವೆಂದು ಭಾವಿಸಿದರು – ಭಗವಂತ ಇಲ್ಲಿ ನೆಲೆಗೊಳ್ಳಲು ಬಯಸುತ್ತಿದ್ದಾನೆ ಎಂದು ಭಾವಿಸಿದರು. ಅಲ್ಲಿಯೇ ದೇವಾಲಯ ನಿರ್ಮಿಸಲಾಯಿತು. ಬನಾಸ್ ನದಿಯ ದಡದಲ್ಲಿ ನಿರ್ಮಿತವಾದ ಈ ಹವೇಲಿ-ದೇವಾಲಯದ ಸುತ್ತಲೂ ನಾಥದ್ವಾರಾ ನಗರ ಬೆಳೆಯಿತು.
ರಾಜ್ ಸಿಂಗ್ ಅವರಿಗೆ ಇದು ಕೇವಲ ಧಾರ್ಮಿಕ ರಕ್ಷಣೆಗೆ ಸೀಮಿತರಾಗಲಿಲ್ಲ – ಇದು ಸಾರ್ವಭೌಮ ನಿರ್ಧಾರವಾಗಿತ್ತು. ಅವರು 100,000 ಸೈನಿಕರನ್ನು ಮೂರ್ತಿಯ ರಕ್ಷಣೆಗಾಗಿ ನಿಯೋಜಿಸಿದರು ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ಬ್ರಜ್ ಪ್ರದೇಶದಲ್ಲಿ ಕೇಂದ್ರೀಕೃತವಾಗಿದ್ದ ಪವಿತ್ರ ಭೂಗೋಳವನ್ನು ಮೇವಾಡ್ಗೆ ವರ್ಗಾಯಿಸಲಾಯಿತು. ಯಾತ್ರಾ ಮಾರ್ಗಗಳು ಮರುರೂಪುಗೊಂಡವು, ಆಚರಣೆಗಳು ಮತ್ತೆ ಜೀವಂತಗೊಂಡವು.
1678ರಿಂದ ಮಾರವಾಡ್ನ ಉತ್ತರಾಧಿಕಾರ ಸಂಕಷ್ಟದ ನಂತರ ಮುಘಲ್ರ ವಿರುದ್ಧ ರಜಪೂತರ ಪ್ರತಿರೋಧ ತೀವ್ರವಾಯಿತು –. ಮೇವಾಡ್ನ ದೇವಾಲಯಗಳ ಮೇಲೆ ಒತ್ತಡ ಬಂದರೂ, ಏಕಲಿಂಗಜಿ ಸೇರಿದಂತೆ ಮುಖ್ಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಲೇ ಇದ್ದವು. ಪ್ರತಿಕ್ರಿಯೆಗಿಂತ ರಕ್ಷಣೆಯೇ ಅವರ ತಂತ್ರವಾಗಿತ್ತು.
ಶ್ರೀನಾಥಜಿಗೆ ಶಾಶ್ವತ ಆಶ್ರಯ
ಮಹಾರಾಣ ರಾಜ್ ಸಿಂಗ್ 1680ರ ಅಕ್ಟೋಬರ್ 22ರಂದು ನಿಧನರಾದರು. ಅವರ ರಾಜ್ಯ ಯುದ್ಧಗಳಿಂದ ಒತ್ತಡಕ್ಕೊಳಗಾದರೂ ಸ್ವಾತಂತ್ರ್ಯವನ್ನು ಉಳಿಸಿಕೊಂಡಿತು. ಅವರು ರಕ್ಷಿಸಿದ ಶ್ರೀನಾಥಜಿಯ ಮೂರ್ತಿ ಇಂದಿಗೂ ನಾಥದ್ವಾರಾದಲ್ಲಿ ಪೂಜಿತವಾಗುತ್ತಿದೆ – 350 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಅಲ್ಲಿ ನೆಲೆಸಿದೆ!
ದೇವಾಲಯಗಳನ್ನು ಕೆಲವೇ ತಿಂಗಳುಗಳಲ್ಲಿ ನಾಶಮಾಡಬಹುದು. ಆದರೆ ಸಂಪ್ರದಾಯಗಳು ಶಕ್ತಿಯುತ ರಕ್ಷಣೆಯೊಂದಿಗೆ ಶಾಶ್ವತವಾಗುತ್ತವೆ. ಶ್ರೀನಾಥಜಿಯ ಕಥೆ ಕೇವಲ ಮೂರ್ತಿ ಭಂಗದ ಬಗ್ಗೆಯಲ್ಲ – ಅದು ದೃಷ್ಟಿಕೋನ ಮತ್ತು ಉದ್ದೇಶದ ಕಥೆ. ಸಾಮ್ರಾಜ್ಯವೊಂದು ಶಕ್ತಿ ಪ್ರಯೋಗಿಸಿ ಬೆದರಿಸಿದಾಗ, ಮೇವಾಡ ಆಶ್ರಯ ನೀಡಿತು. ಆ ಆಶ್ರಯದಿಂದಲೇ ನಂಬಿಕೆಯ ಪರಂಪರೆ ಉಳಿದುಕೊಂಡಿತು.
ಇಂದಿಗೂ ನಾಥದ್ವಾರಾದಲ್ಲಿ ಶ್ರೀನಾಥಜಿ ಬಾಲಕೃಷ್ಣನಂತೆ ಆಡುತ್ತಾ, ಭಕ್ತರನ್ನು ಆಶೀರ್ವದಿಸುತ್ತಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


