ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಇಂದು ನವದೆಹಲಿಯಲ್ಲಿ ವಿಶ್ವದ ಮೊದಲ 100 ಪ್ರತಿಶತ ಎಥೆನಾಲ್ ಇಂಧನ ಹೊಂದಿರುವ ಕಾರನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಡ್ಕರಿ, ಇಂದು ವಿಶ್ವದ ಮೊದಲ BS-VI (ಹಂತ-II), ಎಲೆಕ್ಟ್ರಿಫೈಡ್ ಫ್ಲೆಕ್ಸ್-ಇಂಧನ ವಾಹನವನ್ನು ಬಿಡುಗಡೆ ಮಾಡಿದ ಕಾರಣಕ ದೇಶಕ್ಕೆ ಐತಿಹಾಸಿಕ ದಿನವಾಗಿದೆ. ಭಾರತ ಸ್ವಾವಲಂಬಿ ದೇಶವಾಗಲು ತೈಲ ಆಮದನ್ನು ಶೂನ್ಯಕ್ಕೆ ತರುವ ಅಗತ್ಯವಿದೆ ಎಂದರು.
ಪ್ರಸ್ತುತ ಭಾರತದ ತೈಲ ಆಮದು ವೆಚ್ಚ 16 ಲಕ್ಷ ಕೋಟಿ ರೂಪಾಯಿಗಳಷ್ಟಿದೆ, ಸ್ವಾವಲಂಬಿಯಾಗಲು ಭಾರತವು ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕು ಎಂದು ಗಡ್ಕರಿ ಹೇಳಿದರು.
40 ರಷ್ಟು ಮಾಲಿನ್ಯವು ಸಾರಿಗೆ ವಲಯದಿಂದ ಬರುತ್ತಿದೆ, ಇದು ದೇಶದ ಪ್ರಮುಖ ಕಳವಳವಾಗಿದೆ. ಮಾಲಿನ್ಯವನ್ನು ತಡೆಯಲು ದೇಶವು ಹೆಚ್ಚು ಸುಸ್ಥಿರತೆಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಎಥೆನಾಲ್ ಮಿಶ್ರಣದಿಂದ ಭಾರತದ ಕೃಷಿ ಬೆಳವಣಿಗೆಯು 12 ಪ್ರತಿಶತದಿಂದ 20 ಪ್ರತಿಶತಕ್ಕೆ ಏರುತ್ತದೆ ಮತ್ತು ಸಾಕಷ್ಟು ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂದು ಗಡ್ಕರಿ ಹೇಳಿದರು.
20 ರಷ್ಟು ಎಥೆನಾಲ್ ಮಿಶ್ರಣದ ಅನುಷ್ಠಾನದಿಂದ ಭಾರತವು ವಾರ್ಷಿಕವಾಗಿ 35 ಸಾವಿರ ಕೋಟಿ ರೂಪಾಯಿಗಳ ಆಮದು ಖರ್ಚನ್ನು ಉಳಿಸಬಹುದು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. 2022 ರ ಮೂಲ ಗುರಿಗಿಂತ ಐದು ತಿಂಗಳ ಮುಂಚಿತವಾಗಿ ಎಥೆನಾಲ್ ಮಿಶ್ರಣದ 10 ಪ್ರತಿಶತವನ್ನು ಭಾರತ ಸಾಧಿಸಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.