ನವದೆಹಲಿ: ಮುಂಬಯಿ ದಾಳಿ ಆರೋಪಿ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ರಿಟ್ ಅನ್ನು ಯುಎಸ್ ನ್ಯಾಯಾಲಯ ನಿರಾಕರಿಸಿದೆ, ಇದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರಿಗೆ ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಪ್ರಮಾಣೀಕರಣವನ್ನು ನೀಡಲು ದಾರಿ ಮಾಡಿಕೊಟ್ಟಿದೆ.
2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಆರೋಪವನ್ನು ಈತ ಹೊತ್ತಿದ್ದಾನೆ.”ಹೇಬಿಯಸ್ ಕಾರ್ಪಸ್ ರಿಟ್ಗಾಗಿ ತಹವ್ವುರ್ ರಾಣಾ ಅರ್ಜಿಯನ್ನು ನ್ಯಾಯಾಲಯವು ಪ್ರತ್ಯೇಕ ಆದೇಶದ ಮೂಲಕ ನಿರಾಕರಿಸಿದೆ” ಎಂದು ಯುನೈಟೆಡ್ ಸ್ಟೇಟ್ಸ್ ಡಿಸ್ಟ್ರಿಕ್ಟ್ ಜಡ್ಜ್ ಆಗಸ್ಟ್ 2ರಂದು ತಮ್ಮ ಆದೇಶದಲ್ಲಿ ಬರೆದಿದ್ದಾರೆ.
ಆದರೆ, ರಾಣಾ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಮತ್ತು ಒಂಬತ್ತನೇ ಸರ್ಕ್ಯೂಟ್ ಕೋರ್ಟ್ನಲ್ಲಿ ಮೇಲ್ಮನವಿ ವಿಚಾರಣೆ ನಡೆಯುವವರೆಗೆ ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯಲು ಕೋರಿದ್ದ. ಇದೀಗ ಮೇಲ್ಮನವಿ ತಿರಸ್ಕೃತಗೊಂಡಿದೆ. ಈ ವರ್ಷದ ಜೂನ್ನಲ್ಲಿ, ರಾಣಾ ಅವರು ದಾಳಿಯ ಆರೋಪಿಗಳನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂಬ ಯುಎಸ್ ಸರ್ಕಾರದ ಕೋರಿಕೆಗೆ ಸಮ್ಮತಿಸಿದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ “ಹೇಬಿಯಸ್ ಕಾರ್ಪಸ್ ರಿಟ್” ಸಲ್ಲಿಸಿದ್ದ.
ಪಾಕಿಸ್ತಾನ ಮೂಲದ ರಾಣಾ, ಕೆನಡಾದ ಪ್ರಜೆಯಾಗಿದ್ದು, ಷಿಕಾಗೊದಲ್ಲಿ ಉದ್ಯಮ ನಡೆಸುತ್ತಿದ್ದ. ಈತ ಮುಂಬೈ ದಾಳಿಯ ಆರೋಪಿ ಡೇವಿಡ್ ಕೋಲ್ಮನ್ ಹೆಡ್ಲಿಯ ಬಾಲ್ಯ ಸ್ನೇಹಿತನಾಗಿದ್ದು, ಮುಂಬೈ ದಾಳಿಯ ಸಂಚುಕೋರರಲ್ಲಿ ಒಬ್ಬನಾಗಿದ್ದಾನೆ. 59 ವರ್ಷದ ರಾಣಾನನ್ನು ಹಸ್ತಾಂತರಿಸುವಂತೆ ಭಾರತವು ಅಮೆರಿಕಕ್ಕೆ ಮನವಿ ಮಾಡಿತ್ತು. ಇದಾದ ನಂತರ ಅಮೆರಿಕ ಅಧಿಕಾರಿಗಳು ಈತನನ್ನು ಇತ್ತೀಚೆಗೆ ಪುನಃ ಬಂಧಿಸಿದ್ದರು. ಡೇವಿಡ್ ಹೆಡ್ಲಿ ಪ್ರಸಕ್ತ ಅಮೆರಿಕದಲ್ಲಿ 35 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.