ನವದೆಹಲಿ: ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ಮಂಗಳವಾರ ಮಣಿಪುರ ಹಿಂಸಾಚಾರದ ಬಗ್ಗೆ ಸರ್ಕಾರದ ವಿರುದ್ಧ INDIA ಮೈತ್ರಿಕೂಟ ಮಂಡಿಸಿರುವ ಅವಿಶ್ವಾಸ ನಿರ್ಣಯವನ್ನು ವಿರೋಧಿಸಿದೆ. ಮಣಿಪುರ ರಾಜ್ಯದಲ್ಲಿ ಏನಾಯಿತು ಎಂಬುದಕ್ಕೆ ಹಲವಾರು ದಶಕಗಳ ಹಿಂದಿನ ಸಮಸ್ಯೆಗಳೇ ಕಾರಣ ಎಂದು ಹೇಳಿದೆ.
ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜು ಜನತಾ ದಳದ ಸಂಸದ ಪಿನಾಕಿ ಮಿಶ್ರಾ, ಕಾಂಗ್ರೆಸ್ ತಂದಿರುವ ಯಾವುದೇ ನಿರ್ಣಯವನ್ನು ಬಿಜೆಡಿ ಬೆಂಬಲಿಸುವ ಪ್ರಶ್ನೆಯೇ ಇಲ್ಲ. ತಮ್ಮ ಮುಖವನ್ನು ಉಳಿಸಲು ಮೂಗು ಕತ್ತರಿಸುವುದರಲ್ಲಿ ಅವರು ಬಹಳ ಪ್ರವೀಣರು ಎಂದು ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ಹೇಳಿದರು. ಅವಿಶ್ವಾಸ ನಿರ್ಣಯವನ್ನು ತರುವುದರ ಹಿಂದೆ ರಾಜಕೀಯ ಇದೆ ಮತ್ತು ಅದು ವಿಫಲವಾಗುತ್ತದೆ. ಪ್ರಧಾನಿ ಪ್ರತಿ ಬಾರಿ ಸದನದಲ್ಲಿ ಎದ್ದುನಿಂತು ಮಾತನಾಡಿದಾಗ ಕಾಂಗ್ರೆಸ್ ಪಕ್ಷವನ್ನು ಛಿದ್ರ ಛಿದ್ರ ಮಾಡಿ ಹಾಕುತ್ತಾರೆ ಎಂದಿದ್ದಾರೆ.
“ಈ ನಿರ್ಣಯವನ್ನು ಕಾಂಗ್ರೆಸ್ ಪಕ್ಷವು ತಂದಿರುವುದರಿಂದ ನಾವು ಅದನ್ನು ವಿರೋಧಿಸುತ್ತಿರುವುದಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಇನ್ನೂ ಅನೇಕ ಬಲವಾದ ಕಾರಣಗಳಿವೆ. ಮಣಿಪುರದಲ್ಲಿ ಉಂಟಾದ ಬೆಂಕಿಯು ಕಳೆದ 10 ವರ್ಷಗಳ ಪರಿಣಾಮವಲ್ಲ. ಮಣಿಪುರದಲ್ಲಿ ಸುಮಾರು 50-60 ವರ್ಷಗಳ ಕಲಹದ ಪರಿಣಾಮವಾಗಿದೆ” ಎಂದು ಸಂಸದರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.