ನವದೆಹಲಿ: ಭಾರತ ಕಂಡ ಮಹಾನ್ ವ್ಯಕ್ತಿತ್ವ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಅಬ್ದುಲ್ ಕಲಾಂ ಅವರ ಪುಣ್ಯತಿಥಿಯಾದ ಇಂದು ಇಡೀ ದೇಶವನ್ನು ಗೌರವಾದಾರದಿಂದ ಸ್ಮರಿಸುತ್ತಿದೆ. ಡಾ. ಎಪಿಜೆ ಅಬ್ದುಲ್ ಕಲಾಂ ಅವರು 2015ರ ಜುಲೈ 27ರಂದು ಐಐಎಂ ಶಿಲಾಂಗ್ನಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಹೃದಯಾಘತಕ್ಕೆ ಒಳಗಾಗಿ ನಿಧನರಾದರು.
ಕಲಾಂ ಎಂದರೆ ದೇಶದ ಜನರಿಗೆ ಸದಾ ಸ್ಪೂರ್ತಿ. ಸದಾ ಕನಸು ಕಾಣಿ ಎಂದು ಯುವ ಜನರನ್ನು ಅವರು ಪ್ರೋತ್ಸಾಹಿಸುತ್ತಿದ್ದರು. ಅವರ ಜೀವನ ಕಥೆ ಕನಸುಗಳ ಶಕ್ತಿಯನ್ನು ಹೇಳುತ್ತವೆ ಮತ್ತು ಭಾರತೀಯರನ್ನು ಪ್ರೇರೇಪಿಸುತ್ತದೆ. “ಕನಸು ಎಂದರೆ ನೀವು ಮಲಗಿರುವಾಗ ನೋಡುವುದಲ್ಲ, ಅದು ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲ” ಎಂದು ಅವರು ಹೇಳಿದ್ದರು. ಜನರ ರಾಷ್ಟ್ರಪತಿಯಾಗಿ ಜನರ ಮನಸ್ಸನ್ನು ಅವರಿ ತಟ್ಟಿದ್ದರು. ʼಮಿಸೈಲ್ ಮ್ಯಾನ್ ಆಫ್ ಇಂಡಿಯಾʼ ಬಿರುದು ಪಡೆದ ಅವರು ಭಾರತದ ಪರಮಾಣು ಪರೀಕ್ಷೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಅವರು ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ಅಭಿವೃದ್ಧಿಯ ಹಿಂದೆ ಪ್ರಮುಖ ಶಕ್ತಿಯಾಗಿದ್ದರು. ಡಾ ಕಲಾಂ ಅವರು ಪ್ರಸಿದ್ಧ ವಿಂಗ್ಸ್ ಆಫ್ ಫೈರ್ ಮತ್ತು ಇಗ್ನೈಟೆಡ್ ಮೈಂಡ್ಸ್ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ, ಈ ಪುಸ್ತಕ ಮಕ್ಕಳು ಮತ್ತು ವಯಸ್ಕರಿಗೆ ಅವರ ಕನಸುಗಳನ್ನು ಮುಂದುವರಿಸಲು ಪ್ರೇರೇಪಿಸುತ್ತದೆ.
ಡಾ ಕಲಾಂ ಅವರಿಗೆ 1990 ರಲ್ಲಿ ಪದ್ಮಭೂಷಣ ಮತ್ತು 1997 ರಲ್ಲಿ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ನೀಡಿ ಗೌರವಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.