ತಿರುವನಂತಪುರಂ: ಮಣಿಪುರ ಸಮಸ್ಯೆಯನ್ನು ನೆಪ ಮಾಡಿಕೊಂಡು ಹಿಂದೂ ಸಮಾಜದ ವಿರುದ್ಧ ದ್ವೇಷ ಕಾರುವ ಪ್ರಯತ್ನ ಮಾಡಲಾಗುತ್ತಿದೆಯೇ ಎಂಬ ಅನುಮಾನಕ್ಕೆ ಕೇರಳದಲ್ಲಿ ನಡೆದ ಘಟನೆಯೊಂದು ಪುಷ್ಟಿ ನೀಡಿದೆ. ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲೆಯ ಕನ್ಹಂಗಾಡ್ನಲ್ಲಿ ಮುಸ್ಲಿಂ ಯೂತ್ ಲೀಗ್ (ಎಂವೈಎಲ್) ನಡೆಸಿದ ಪ್ರತಿಭಟನೆಯಲ್ಲಿ ಹಿಂದೂ ಸಮಾಜದ ವಿರುದ್ಧ ಘೋಷಣೆಗಳನ್ನು ಕೂಗಲಾಗಿದೆ.
ಈ ಪ್ರತಿಭಟನೆ ಹೊಸ ವಿವಾದವನ್ನು ಹುಟ್ಟುಹಾಕಿದೆ. ಇಲ್ಲಿ ಪ್ರತಿಭಟನಾಕಾರರು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದಕ್ಕೆ ವ್ಯಾಪಕವಾದ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ಪ್ರತಿಭಟನಾಕಾರರು ಹಿಂದೂ ವಿರೋಧಿ ಘೋಷಣೆಗಳನ್ನು ಕೂಗುತ್ತಿರುವ ದೃಶ್ಯಗಳು ವೈರಲ್ ಆಗಿವೆ. ರ್ಯಾಲಿ ವೇಳೆ ‘ದೇವಸ್ಥಾನಗಳ ಮುಂದೆ ನೇಣು ಹಾಕಿ ಸುಟ್ಟು ಹಾಕುತ್ತೇವೆ, ಯೂತ್ ಲೀಗ್ ಜಿಂದಾಬಾದ್, ಮುಸ್ಲಿಂ ಲೀಗ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಪ್ರತಿಭಟನಾಕಾರರು ಮೊಳಗಿಸಿದ್ದಾರೆ. ಇದರ ಬಗ್ಗೆ ತೀವ್ರ ಆಕ್ರೋಶಗಳು ವ್ಯಕ್ತವಾದ ಬಳಿಕ ಎಚ್ಚೆತ್ತುಕೊಂಡ ಮುಸ್ಲಿಂ ಯೂತ್ ಲೀಗ್ ವಿವಾದಾತ್ಮಕ ಘೋಷಣೆಗಳನ್ನು ಎತ್ತಿದ ಕಾಞಂಗಾಡ್ನಿಂದ ಬಂದಿರುವ ಸದಸ್ಯ ಅಬ್ದುಲ್ ಸಲಾಂ ಎಂಬಾತನನ್ನು ಅಮಾನತುಗೊಳಿಸಿರುವುದಾಗಿ ಘೋಷಿಸಿದೆ.
"WILL HANG YOU IN FRONT OF TEMPLES AND BURN YOU DOWN,
YOUTH LEAGUE ZINDABAD,
MUSLIM LEAGUE ZINDABAD"Muslim Youths in Kasargod Kerala takes out rally in the name of Manipur and openly raises death threats on Hindu society@ANI@republic@blsanthosh@amitmalviya@ShefVaidya pic.twitter.com/eYNq93GiVD
— ബിജെപി മല്ലപ്പള്ളി മണ്ഡലം (@BjpMallappally) July 26, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.