ನವದೆಹಲಿ: ಭಾರತದಂತಹ ವೇಗವಾಗಿ ಪ್ರಗತಿ ಹೊಂದುತ್ತಿರುವ ದೇಶಕ್ಕೆ ನಗರ ಯೋಜನೆ ಇಂದಿನ ಅಗತ್ಯವಾಗಿದೆ. ಇದು ಅಮೃತ ಕಾಲದಲ್ಲಿ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಗರ ಯೋಜನೆ, ಅಭಿವೃದ್ಧಿ ಮತ್ತು ನೈರ್ಮಲ್ಯ ಕುರಿತು ಬಜೆಟ್ ನಂತರದ ವೆಬ್ನಾರ್ನಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಅವರು, 2023-24 ರ ಕೇಂದ್ರ ಬಜೆಟ್ ನಗರ ಯೋಜನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಗಮನವನ್ನು ಹೊಂದಿದೆ ಎಂದು ಹೇಳಿದರು.
ಅಭಿವೃದ್ಧಿಯಾಗುತ್ತಿರುವ ಹೊಸ ನಗರಗಳು 21 ನೇ ಶತಮಾನದಲ್ಲಿ ಭಾರತಕ್ಕೆ ಹೊಸ ಗುರುತನ್ನು ಸೃಷ್ಟಿಸುತ್ತದೆ, ಭಾರತವು ವೇಗವಾಗಿ ನಗರೀಕರಣಗೊಳ್ಳುತ್ತಿರುವುದರಿಂದ ಭವಿಷ್ಯದ ಮೂಲಸೌಕರ್ಯಗಳನ್ನು ನಿರ್ಮಿಸುವುದು ಮುಖ್ಯವಾಗಿದೆ ಎಂದರು.
ಸಾರಿಗೆ ಯೋಜನೆ, ನಗರ ಮೂಲಸೌಕರ್ಯ ಯೋಜನೆ ಮತ್ತು ನೀರಿನ ನಿರ್ವಹಣೆ ನಗರ ಯೋಜನೆಯಲ್ಲಿ ಗಮನಹರಿಸಬೇಕಾದ ಕೆಲವು ಕ್ಷೇತ್ರಗಳಾಗಿವೆ ಎಂದು ಮೋದಿ ಹೈಲೈಟ್ ಮಾಡಿದರು.
ಭಾರತವು ಆರ್ಥಿಕತೆಯನ್ನು ನಗರಾಭಿವೃದ್ಧಿಯ ಪ್ರಮುಖ ಆಧಾರಸ್ತಂಭವನ್ನಾಗಿ ಮಾಡುತ್ತಿದೆ ಎಂದ ಅವರು, ನಗರ ಯೋಜನೆ ಮತ್ತು ನಗರ ಆಡಳಿತ ತಜ್ಞರು ಜಿಐಎಸ್ (ಭೌಗೋಳಿಕ ಮಾಹಿತಿ ವ್ಯವಸ್ಥೆ) ಮಾಸ್ಟರ್ ಪ್ಲಾನಿಂಗ್, ದಕ್ಷ ಮಾನವ ಸಂಪನ್ಮೂಲ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ನವೀನ ಆಲೋಚನೆಗಳೊಂದಿಗೆ ಹೊರಬರಬೇಕು ಎಂದು ಅವರು ಕೇಳಿಕೊಂಡರು.
ನಗರದ ಅಭಿವೃದ್ಧಿಯಲ್ಲಿ ಪ್ರಮುಖ ಆಧಾರ ಸ್ತಂಭವೆಂದರೆ ಸಾರಿಗೆ ಯೋಜನೆಯಾಗಿದೆ ಮತ್ತು ಹಸಿರು ಚಲನಶೀಲತೆ, ರಸ್ತೆಗಳ ವಿಸ್ತರಣೆ ಮತ್ತು ಎತ್ತರದ ರಸ್ತೆಗಳು ಸಾರಿಗೆ ಯೋಜನೆಯಲ್ಲಿ ಸೇರಿಸಬೇಕಾದ ಕೆಲವು ವಿಷಯಗಳಾಗಿವೆ ಎಂದು ಹೇಳಿದರು. ನಗರದ ಅಭಿವೃದ್ಧಿಯೊಂದಿಗೆ ಮಾನವ ಕೇಂದ್ರಿತ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.