ಇಂಫಾಲ: ಮಣಿಪುರದ ಇಂಫಾಲದಲ್ಲಿ ಸಮಾಜದ ಮುಖ್ಯವಾಹಿನಿಗೆ ಮರಳುವ ಸಲುವಾಗಿ 31 ಬಂಡುಕೋರರು ಶಸ್ತ್ರಗಳನ್ನು ತ್ಯಜಿಸಿ ಶರಣಾಗತರಾಗಿದ್ದಾರೆ.
ಭದ್ರತಾ ಪಡೆಗಳು ಮಣಿಪುರ ಪೋಲೀಸ್ ಇಲಾಖೆ ಜೊತೆ ಸೇರಿ KCP(PWG), KYKL, PREPAK ಮತ್ತು UNLF ಸಂಘಟನೆಗಳ 31 ಬಂಡುಕೋರರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಸೇರಲು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ಮಣಿಪುರ ಸರ್ಕಾರವು ಇಂಫಾಲ್ನಲ್ಲಿ ಗೃಹಪ್ರವೇಶ ಸಮಾರಂಭವನ್ನು ಆಯೋಜಿಸಿದ್ದು, ಅಲ್ಲಿ ವಿವಿಧ ಬಂಡುಕೋರ ಸಂಘಟನೆಗಳ ಸಮವಸ್ತ್ರಗಳನ್ನು ತೊಟ್ಟ 31 ಬಂಡುಕೋರರು ಮಣಿಪುರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಸಮ್ಮುಖದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರು.
ಬಂಡುಕೋರರು ಒಂದು ಎಂ-16 ರೈಫಲ್, ಒಂದು ಎಂ-4 ರೈಫಲ್, ಮೂರು ಸುತ್ತುಗಳ ಒಂದು ಲ್ಯಾಥೋಡ್ ಗನ್, ಐದು ಸುತ್ತುಗಳ ಸ್ಥಳೀಯ ನಿರ್ಮಿತ ಸಿಂಗಲ್ ಬ್ಯಾರೆಲ್ ಗನ್, ಮೂರು .32 ಪಿಸ್ತೂಲ್, ಮೂರು .22 ಪಿಸ್ತೂಲ್, ಒಂದು 12 ಎಂಎಂ ಪಿಸ್ತೂಲ್, ಒಂದು ಐಇಡಿ, ಮತ್ತು ನಾಲ್ಕು 7.65mm ಪಿಸ್ತೂಲುಗಳ ಸಮೇತ ಶರಣಾದರು ಎಂದು ಮೂಲಗಳು ತಿಳಿಸಿವೆ.
ಭದ್ರತಾ ಪಡೆಗಳು ಈ ನಿರ್ಧಾರಕ್ಕಾಗಿ ದಂಗೆಕೋರರನ್ನು ಅಭಿನಂದಿಸಿವೆ. ಅಲ್ಲದೇ ತಪ್ಪು ಮಾರ್ಗವನ್ನು ಆಯ್ಕೆ ಮಾಡಿದ ಎಲ್ಲರ ಮೇಲೂ ಈ ನಿರ್ಧಾರ ಮುಖ್ಯವಾಹಿನಿಗೆ ಮರಳಿ ಸೇರಲು ಮತ್ತು ಸಂತೋಷ ಮತ್ತು ಶಾಂತಿಯುತ ಜೀವನವನ್ನು ನಡೆಸಲು ಪ್ರಭಾವ ಬೀರುತ್ತದೆ ಎಂದಿದೆ.
ಶರಣಾದ ಬಂಡುಕೋರರ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಸುರಕ್ಷಿತವಾಗಿ ಕುಟುಂಬಕ್ಕೆ ಮರಳಿ ಕರೆತಂದ ಭದ್ರತಾ ಪಡೆಗಳಿಗೆ ಕೃತಜ್ಞತೆ ಸಲ್ಲಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.