ನವದೆಹಲಿ: ರಿಷಬ್ ಶೆಟ್ಟಿ ನಿರ್ದೇಶನದ ಹೊಂಬಾಳೆ ಫಿಲಂಸ್ನ ‘ಕಾಂತಾರ’ ಸಿನಿಮಾ ಪ್ರಪಂಚದಾದ್ಯಂತ ಹವಾ ಸೃಷ್ಟಿ ಮಾಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಈ ಸಿನಿಮಾ ಹಲವಾರು ಉದಾಹರಣೆಗಳನ್ನು ನಿರಂತರವಾಗಿ ಸೃಷ್ಟಿಸುತ್ತಿದೆ. ಕಾಂತಾರ ಜನಸಾಮಾನ್ಯರ ಹೃದಯವನ್ನು ಗೆದ್ದರೆ, ಇದು ವಿಮರ್ಶಕ, ಸೆಲೆಬ್ರಿಟಿಗಳು ಮತ್ತು ವಿವಿಧ ಕ್ಷೇತ್ರಗಳ ಅನೇಕ ಗಣ್ಯರಿಂದ ಉತ್ತಮ ವಿಮರ್ಶೆಗಳನ್ನು ಗಳಿಸಿದೆ.
ಇದೀಗ ಈ ಸಿನಿಮಾ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಅವರು ಶ್ಲಾಘನೆಗಳಿಗೆ ಪಾತ್ರವಾಗಿದೆ. ಕಾಂತಾರವನ್ನು ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಪ್ರದರ್ಶಿಸಿದ ಉದಾಹರಣೆ ಎಂದು ಅವರು ಪರಿಗಣಿಸಿದ್ದಾರೆ.
ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಭೆ ‘ಇನ್ವೆಸ್ಟ್ ಕರ್ನಾಟಕ 2022’ರಲ್ಲಿ ಮಾತನಾಡಿರುವ ಅವರು, “ಜಗತ್ತಿನ ಎಲ್ಲೇ ಹೋದರೂ ಕರ್ನಾಟಕದ ಬಗ್ಗೆ ಕುತೂಹಲ ಇದೆ. ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ದೊಡ್ಡ ಕಂಪನಿಗಳ ಹೂಡಿಕೆ ಯೋಜನೆಗಳ ಬಗ್ಗೆ ಕೇಳಿಬರುತ್ತಿದೆ. ಇದು ಕಾಂತಾರ ಚಿತ್ರದ ಮರು ಪ್ರದರ್ಶನದಂತೆ ಭಾಸವಾಗುತ್ತಿದೆ. ಕಾಂತಾರ ಕರ್ನಾಟಕದ ಸಂಸ್ಕೃತಿಯನ್ನು ಪ್ರದರ್ಶಿಸುವ ಕಡಿಮೆ ಬಜೆಟ್ ಚಿತ್ರ. ಇದು ತನ್ನ ಹೂಡಿಕೆಗಿಂತ ಸುಮಾರು 20 ಪಟ್ಟು ಗಳಿಸಿದೆ. ಹೂಡಿಕೆದಾರರು ಮತ್ತು ಉದ್ಯಮವು ಭಾರತ ಮತ್ತು ಅತ್ಯಂತ ಪ್ರಗತಿಪರ ನೀತಿಗಳನ್ನು ಹೊಂದಿರುವ ರಾಜ್ಯಕ್ಕೆ ಆಕರ್ಷಿತವಾಗುತ್ತಿದ್ದಾರೆ” ಎಂದಿದ್ದಾರೆ.
ಈಗಾಗಲೇ ಅನಿಲ್ ಕುಂಬ್ಳೆ, ಪ್ರಭಾಸ್, ಪ್ರಶಾಂತ್ ನೀಲ್, ವಿವೇಕ್ ರಂಜನ್ ಅಗ್ನಿಹೋತ್ರಿ, ಸೂಪರ್ಸ್ಟಾರ್ ರಜನಿಕಾಂತ್ನಿಂದ ಹಿಡಿದು ಭಾರತದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮತ್ತು ವಿವಿಧ ಕ್ಷೇತ್ರಗಳ ಗಣ್ಯರಿಂದ ಸಾಕಷ್ಟು ಮೆಚ್ಚುಗೆ ಪಡೆದಿರುವ ಕಾಂತಾರ ನಿಜಕ್ಕೂ ಕನ್ನಡಿಗರ ಹೆಮ್ಮೆ.
Wherever I go to in the world, there is great excitement about Karnataka.
Have been hearing about investment plans by big companies in and around Bengaluru and other parts of Karnataka. Feels like the re-run of the film Kantara: @PiyushGoyal #InvestKarnataka2022
— Piyush Goyal Office (@PiyushGoyalOffc) November 2, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.